ಕೊಂಡೆವೂರು ಶ್ರೀಗಳ 21 ನೇ ಚಾತುರ್ಮಾಸ್ಯ ಮಂಗಳೋತ್ಸವ ಮತ್ತು 48 ಗಂಟೆಗಳ ಅಖಂಡ ಭಜನೋತ್ಸವ

Share with



ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 21 ನೇ ಚಾತುರ್ಮಾಸ್ಯ ದಿ.18.09.2024 ಬುಧವಾರ ಸಂಪನ್ನಗೊಳ್ಳಲಿದೆ.

ದಿ.15.09.2024 ಸೂರ್ಯಾಸ್ತದಿಂದ ದಿ.17.09.2024 ಸೂರ್ಯಾಸ್ತದವರೆಗೆ ” ಅಖಂಡ ಭಜನೋತ್ಸವ” ನಡೆಯಲಿದೆ. ದಿ.17.09.2024 ರಂದು ಸಾಯಂಕಾಲ 6.30 ರಿಂದ ಪೂಜ್ಯ ಶ್ರೀಗಳ  ದಿವ್ಯ ಉಪಸ್ಥಿತಿಯಲ್ಲಿ ಮಾಜಿ MLC ಶ್ರೀ ಮೋನಪ್ಪ ಭಂಡಾರಿಯವರ  ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಬಲರಾಮ್ ಭಟ್ ಕಾಕುಂಜೆ, ಆಡಳಿತ ಮೊಕ್ತೇಸರರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಡಾಜೆ, ಶ್ರೀ ಎಮ್. ಪ್ರಭಾಕರ,  ಅಧ್ಯಕ್ಷರು ಬನಶಂಕರಿ ದೇವಸ್ಥಾನ, ಭದ್ರಾವತಿ, ಶ್ರೀ ಡಿ. ರಾಮಮೂರ್ತಿ, ಕಾರ್ಯದರ್ಶಿಗಳು ಸಿದ್ಧರೂಢ ಆಶ್ರಮ  ಭದ್ರಾವತಿ, ಶ್ರೀ  ಹರಿನಾಥ ಭಂಡಾರಿ, ಅಧ್ಯಕ್ಷರು ,ಸೇವಾಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಳಿಂಜ, ಶ್ರೀ ಬಾಲಕೃಷ್ಣ, ದೀಕ್ಷಾ ವುಡ್ ಇಂಡಸ್ಟ್ರೀಸ್  ಕುಂಜತ್ತೂರು, ಶ್ರೀ ಮೋಹನ್ ಶೆಟ್ಟಿ ತೂಮಿನಾಡು ಉಪಸ್ಥಿತರಿರುತ್ತಾರೆ.


ದಿ.18.09.2024 ಚಾತುರ್ಮಾಸ್ಯ ಮಂಗಲೋತ್ಸವದ ಸಂದರ್ಭದಲ್ಲಿ ಪೂಜ್ಯ ಶ್ರೀ ಗುರುಗಳಿಂದ ಪಾತಃ 5.30 ರಿಂದ ಪಟ್ಟದ ದೇವರ ಪೂಜೆ ನಂತರ ಮೃತ್ತಿಕ ವಿಸರ್ಜನೆ ನಡೆಯಲಿದೆ ಬಳಿಕ 7.30 ಕ್ಕೆ ಮಹಾಪೂಜೆ ಗೋಪೂಜೆ ನಡೆದ ನಂತರ ಪೂಜ್ಯರು ಮಂಗಲ ಮಂತ್ರಾಕ್ಷತೆ ಅನುಗ್ರಹಿಸುತ್ತಾರೆ.
  ಭಕ್ತಾದಿಗಳು ಈ ಎಲ್ಲಾ ಕರ‍್ಯಕ್ರಮಗಳಲ್ಲಿ  ಪಾಲ್ಗೊಂಡು ಪುಣ್ಯ ಭಾಜನರಾಗಬೇಕಾಗಿ ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share with

Leave a Reply

Your email address will not be published. Required fields are marked *