ಕೊಂಡೆವೂರು ಶ್ರೀಗಳ ೨೧ ನೇ ಚಾತುರ್ಮಾಸ್ಯ ವ್ರತಾಚರಣೆ

Share with


ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ತಮ್ಮ ೨೧ ನೇ ಚಾತುರ್ಮಾಸ್ಯ ವ್ರತಸಂಕಲ್ಪವನ್ನು ಗುರುಪೂರ್ಣಿಮೆಯಂದು ದಿನಾಂಕ ೨೧.೦೭.೨೦೨೪ ಆದಿತ್ಯವಾರ  ಕೊಂಡೆವೂರು ಮಠದಲ್ಲಿ ಕೈಗೊಳ್ಳಲಿದ್ದಾರೆ. ಆ ದಿನ ಬೆಳಿಗ್ಗೆ ೯.೦೦ ಕ್ಕೆ ಗಣಹೋಮ, ಶ್ರೀ ನಿತ್ಯಾನಂದ ಗುರುದೇವರಿಗೆ ಪಂಚಾಮೃತಾಭೀಷೇಕ, ಸೀಯಾಳಾಭೀಷೇಕ, ೧೦.೩೦ ಕ್ಕೆ ವ್ಯಾಸಪೂಜೆ ಆರಂಭವಾಗಿ ೧೨.೦೦ ಕ್ಕೆ ಮಂಗಳಾರತಿ, ೧೨.೩೦ ಕ್ಕೆ ಮಹಾಪೂಜೆ ನಂತರ ಅನ್ನಪ್ರಸಾದ ನಡೆಯಲಿದೆ. ಸಾಯಂಕಾಲ ೭ ಕ್ಕೆ “ಶ್ರೀ ಗುರುಪಾದುಕಾ ಪೂಜೆ”, ಭಜನೆ ನಂತರ ಪರಮಪೂಜ್ಯರು ಸತ್ಸಂಗ ನಡೆಸಿ ಅನುಗ್ರಹ ಮಂತ್ರಾಕ್ಷತೆ ನೀಡಲಿದ್ದಾರೆ. ೧೮.೦೯.೨೦೨೪ ಕ್ಕೆ ಸಂಪನ್ನಗೊಳ್ಳಲಿರುವ ಚಾತುರ್ಮಾಸ್ಯದ ಈ  ಸತ್ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿದಿನ ಸಂಜೆ ೫.೩೦ ರಿಂದ ೭ ರವರೆಗೆ ವಿವಿಧ ಭಜನಾ ತಂಡಗಳಿooದ ಭಜನಾಸೇವೆ ನಡೆಯಲಿದ್ದು, ಪ್ರತೀ ಭಾನುವಾರ ವಿದ್ವಾಂಸರಿದ ಪ್ರವಚನ, ಯಕ್ಷಗಾನ ತಾಳಮದ್ದಳೆ, ಭರತನಾಟ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಚಾತುರ್ಮಾಸ್ಯದ ಈ ಪುಣ್ಯ ಸಮಯದಲ್ಲಿ ಭಕ್ತಾದಿಗಳು ಶ್ರೀ ಮಠಕ್ಕೆ ಆಗಮಿಸಿ ಶ್ರೀ ಗಾಯತ್ರೀ ಮಾತೆಯ ಹಾಗೂ ನಿತ್ಯಾನಂದ ಭಗವಾನರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಕೊಂಡೆವೂರು ಮಠದ ಪ್ರಕಟನೆಯಲ್ಲಿ ತಿಳಿಸಲಾಗಿದೆ.


Share with

Leave a Reply

Your email address will not be published. Required fields are marked *