ರಸ್ತೆ ಮಧ್ಯೆದಲ್ಲಿ ಅಪಘಾತಕ್ಕೆ ಕಾರಣವಾಗುತ್ತಿರುವ ವಿದ್ಯುತ್ ಕಂಬ: ತೆರವುಗೊಳಿಸಲು ಒತ್ತಾಯ

Share with

ಉಪ್ಪಳ: ವಿದ್ಯುತ್ ಕಂಬವೊಂದು ನಡು ರಸ್ತೆಯಲ್ಲಿದ್ದು ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸಬಹುದಾಗಿದೆ. ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ಉಪ್ಪಳ ವಿದ್ಯುತ್ ಇಲಾಖೆ ವ್ಯಾಪ್ತಿಗೊಳಪಡುವ ಹೆದ್ದಾರಿಯಿಂದ ಕೆಲವೇ ಮೀಟರ್ ದೂರದ ನಯಬಜಾರ್‌ನ ಅಂಬಾರು ರಸ್ತೆಯಲ್ಲಿ ಈ ವಿದ್ಯುತ್ ಕಂಬ ಆತಂಕಕ್ಕೆ ಕಾರಣವಾಗುತ್ತಿದೆ.

ರಸ್ತೆ ಮಧ್ಯೆದಲ್ಲಿ ಅಪಘಾತಕ್ಕೆ ಕಾರಣವಾಗುತ್ತಿರುವ ವಿದ್ಯುತ್ ಕಂಬ.

ಈ ಹಿಂದೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಲವು ವರ್ಷಗಳ ಹಿಂದೆ ರಸ್ತೆ ಅಗಲಗೊಳಿಸಿದಾಗ ಕಂಬವನ್ನು ತೆರವುಗೊಳಿಸದ ಕಾರಣ ಇದೀಗ ರಸ್ತೆಯ ಮಧ್ಯ ಭಾಗಕ್ಕೆ ತಲುಪಿದೆ. ಹಲವು ಭಾರಿ ತೆರವುಗೊಳಿಸಲು ತಿಳಿಸಿದರೂ ಕ್ರಮಕ್ಕೆ ಮುಂದಾಗಲಿಲ್ಲವೆಂದು ಸ್ಥಳೀಯರು ತಿಳೀಸಿದ್ದಾರೆ. ಈ ರಸ್ತೆಯಿಂದ ಅಂಬಾರು, ಚೆರುಗೋಳಿ, ಸೋಂಕಾಲು, ಪ್ರತಾಪನಗರಕ್ಕೆ ಸಂಗಮಿಸುತಿದ್ದು, ನೂರಾರು ವಾಹನಗಳು ಸಂಚಾರ ನಡೆಸುತ್ತಿದೆ.

ಅಲ್ಲದೆ ಈ ಪರಿಸರದಲ್ಲಿ ಅಗ್ನಿ ಶಾಮಕ ಕೇಂದ್ರ ಕಾರ್ಯಚರಿಸುತ್ತಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿರುವುದಾಗಿ ದೂರಲಾಗಿದೆ. ಈ ಕಂಬದಲ್ಲಿ ಪರಿಸರದ ವ್ಯಾಪಾರ ಸಂಸ್ಥೆಗಳು ಮನೆಗಳ ಸಹಿತ ಭಾರೀ ಪ್ರಮಾಣದಲ್ಲಿ ಸಂಪರ್ಕವಿದೆ. ಅಪಘಾತಕ್ಕೀಡಾಗಿ ಕಂಬ ಮುರಿದು ಬಿದ್ದಲ್ಲಿ ದುರಂತ ಸಂಭವಿಸಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ವಿದ್ಯುತ್ ಇಲಾಖೆ ಕಂಬವನ್ನು ಮಧ್ಯಭಾಗದಿಂದ ತೆರವುಗೊಳಿಸಿ ಬದಿಗೆ ಸರಿಸಿ ಸ್ಥಾಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *