ಉಪ್ಪಳ: ಶೆಡ್ಡಿನಿಂದ ಕಾರನ್ನು ಹಿಂದಕ್ಕೆ ತೆಗೆಯುವ ವೇಳೆ ಒಂದುವರೆ ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.


ಉಪ್ಪಳ ಬಳಿಯ ಕೊಡಂಗೆ ರಸ್ತೆಯ ಕೂಡಂ ಬೈಲು ನಿವಾಸಿ ನಿಸಾರ್ ರವರ ಒಂದೂವರೆ ವರ್ಷದ ಮಸ್ತು ಜಾಸಿದ್ ಮೃತಪಟ್ಟ ಧಾರುಣ ಘಟನೆ ನಡೆದಿದೆ ನ.12ರಂದು ಸಂಜೆ 4:30 ವೇಳೆ ಮಗುವಿನ ಚಿಕ್ಕಪ್ಪ ತೌಸೀಫ್ ಶೆಡ್ಡಿನಿಂದ ಕಾರನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಹಿಂಬದಿಯಲ್ಲಿ ಮಗು ನಿಂತಿದ್ದೆನ್ನಲಾಗಿದೆ ಈ ಬಗ್ಗೆ ತಿಳಿಯದೆ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಮಗು ಅದರಡಿ ಸಿಲುಕಿ ಗಂಭೀರ ಗಾಯಗೊಂಡಿದ್ದು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದೆ. ಮೃತ ಮಗುವಿನ ತಂದೆ, ತಾಯಿ, ಸಹೋದರ ಹಾಗೂ ಬಂಧುಗಳನ್ನು ಅಗಲಿದ್ದಾರೆ.




