ಉಪ್ಪಳ: ಬಿದ್ದು ಸಿಕ್ಕಿದ 10ಸಾವಿರ ರೂ. ಒಳಗೊಂಡ ಪರ್ಸನ್ನು ವಾರೀಸುದಾರನಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಕೂಲಿ ಕಾರ್ಮಿಕ

Share with

ಉಪ್ಪಳ: ರಸ್ತೆಯಲ್ಲಿ ಬಿದ್ದು ಸಿಕ್ಕಿದ 10 ಸಾವಿರ ರೂ ಹಾಗೂ ದಾಖಲೆಗಳು ಒಳಗೊಂಡ ಪರ್ಸನ್ನು ಅದರ ವಾರೀಸುದಾರನಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.

ಪರ್ಸನ್ನು ವಾರೀಸುದಾರನಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದ ಕೂಲಿ ಕಾರ್ಮಿಕ

ಉಪ್ಪಳದ ಪತ್ವಾಡಿ ನಿವಾಸಿ ಕೂಲಿ ಕಾರ್ಮಿಕ ಸಿದ್ದಿಕ್ ಎಂಬವರು ಹಣವನ್ನು ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ. ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ಉದ್ಯೋಗಿ ಸುರೇಶ್ ಶೆಟ್ಟಿ ಹೇರೂರು ಎಂಬವರ ಪರ್ಸ್ ಏಪ್ರಿಲ್ 1ರಂದು ಬೆಳಿಗ್ಗೆ ಕೊಂಡೆವೂರು ಆಶ್ರಮದಿಂದ ಬ್ಯಾಂಕ್‌ಗೆ ತೆರಳುತ್ತಿರುವ ಮಧ್ಯೆ ಪರ್ಸ್ ಕಳೆದು ಹೋಗಿದೆ.

ಅದೇ ದಿನ ಬೆಳಿಗ್ಗೆ ಪತ್ವಾಡಿ ರಸ್ತೆಯಿಂದ ಕೆಲಸಕ್ಕೆ ಹೋಗುತ್ತಿದ್ದಾಗ ಸಿದ್ದಿಕ್‌ರಿಗೆ ಪರ್ಸ್ ಬಿದ್ದು ಸಿಕ್ಕಿದೆ. ಅದರಲ್ಲಿ 10,500ರೂ ಅಲ್ಲದೆ ಆಧಾರ್, ಪಾನ್ ಕಾರ್ಡ್ ಸಹಿತ ವಿವಿಧ ದಾಖಲೆಗಳು ಹೊಂದಿದೆ. ಅಂದು ಸಂಜೆ ಅವರು ವಾರೀಸುದಾರರ ಪೋನ್ ನಂಬ್ರ ಸಂಗ್ರಹಿಸಿ ಅವರಿಗೆ ಕರೆ ಮಾಡಿದ್ದಾರೆ. ಬಳಿಕ ನಿನ್ನೆ ಬೆಳಿಗ್ಗೆ ಉಪ್ಪಳದಲ್ಲಿ ವಾರೀಸು ದಾರನಿಗೆ ಹಣ ಹೊಂದಿದ. ಪರ್ಸು ತಲುಪಿ ಮಾನವೀಯತೆ ಮೆರೆದಿದ್ದಾರೆ.


Share with

Leave a Reply

Your email address will not be published. Required fields are marked *