ಬಿಗ್ ಬಾಸ್ ಮನೆಯಲ್ಲಿ ಆಟಗಾರನೋ? ಅತಿಥಿಯೋ? ಕನ್ಫ್ಯೂಶನ್ನಲ್ಲಿ ಧನ್ರಾಜ್ ಕಣ್ಣೀರು

Share with

ಬೆಂಗಳೂರು: ಬಿಗ್ ಬಾಸ್ ಸೀಸನ್ 11 ಬಾರಿ ಕುತೂಹಲದಿಂದ ಸಾಗುತ್ತಿದೆ. ಇದರ ನಡುವೆ ಬಿಗ್ ಬಾಸ್ ಮಾಡಿದ ಕರೆ ಸ್ಪರ್ಧಿಗಳಿಗೆ ಶಾಕ್ ನೀಡಿದರೆ, ಅತ್ತ ನಾನು ಈ ಮನೆಯಿಂದ ಹೊರಟು ಹೋಗುತ್ತೇನೆ ಎಂಬ ಮಾತು ಎಲ್ಲರನ್ನು ತಲೆ ಕೆಡಿಸುವಂತೆ ಮಾಡಿದೆ. ಇದರ ನಡುವೆ ಕ್ಯಾಪ್ಟನ್ ಶಿಶರ್ಗೆ ಬಿಗ್ ಬಾಸ್ ನಾಮಿನೇಟ್ ಮಾಡುವ ಆಯ್ಕೆಯೊಂದನ್ನು ನೀಡಿದ್ದು, ಈ ವೇಳೆ ಧನ್ರಾಜ್ ಆಚಾರ್ ಅವರನ್ನು ನಾಮಿನೇಟ್ ಮಾಡಿದ್ದಾರೆ.

ಧನ್ರಾಜ್ ಆಚಾರ್ ಅವರನ್ನು ನಾಮಿನೇಟ್ ಮಾಡಿದ ಬಳಿಕ ಅವರು ಬಿಗ್ ಬಾಸ್ ಮನೆಯಲ್ಲಿ ಇನ್ನೂ ಕನ್ಫ್ಯೂಶನ್ನಲ್ಲಿ ಇದ್ದಾರೆ. ಆಟಗಾರನೋ? ಅಥವಾ ಅತಿಥಿಯೋ? ಎಂಬ ಗೊಂದಲದಲ್ಲಿ ಇದ್ದಾರೆ ಎಂದು ಶಿಶಿರ್ ಕಾರಣ ತಿಳಿಸಿದ್ದಾರೆ.

ಬಳಿಕ ಮನೆ ಮಂದಿಯ ಮುಂದೆ ಈ ವಿಚಾರವನ್ನು ತಿಳಿಸುತ್ತಾ, ಧನ್ರಾಜ್ ಮುಂದೆಯೇ ನೀವು ಎಲ್ಲೋ ಕಳೆದು ಹೋಗಿದ್ದೀರಾ ಎಂಬುದು ನನ್ನ ಅನಿಸಿಕೆ ಎಂದು ಶಿಶಿರ್ ಹೇಳಿದ್ದಾರೆ.



ಶಿಶಿರ್ ಮಾಡಿರುವ ನಾಮಿನೇಟ್ ಪ್ರಕ್ರಿಯೆಯಿಂದ ಟೆನ್ಶನ್ಗೆ ಒಳಗಾದ ಧನ್ರಾಜ್ ಒಬ್ಬರೇ ಕುಳಿತು ಕಣ್ಣೀರು ಹಾಕಿದ್ದಾರೆ. ನಾನೇ ಅನ್ಫಿಟ್ ಅನಿಸೋಕೆ ಶುರುವಾಗಿ ಹೋಗಿದೆ ಎಂದು ಹೇಳಿದ್ದಾರೆ. ಈ ವೇಳೆ ಹಂಸಾ ಮತ್ತು ಐಶ್ವರ್ಯಾರವರು ಧನ್ರಾಜ್ ಕಣ್ಣೀರು ಹಾಕೋದನ್ನು ನೋಡಿ ಸಮಾಧಾನ ಪಡಿಸಿದ್ದಾರೆ.


Share with

Leave a Reply

Your email address will not be published. Required fields are marked *