ಪುತ್ತೂರು: ನಗರದ ಮಹಾಲಕ್ಷ್ಮಿ ಕೋಲ್ಡ್ ಹೌಸ್ ಪಕ್ಕದಲ್ಲಿರುವ ಟೈಮ್ ಸೆಂಟರ್ ವಾಚ್ ರಿಪೇರಿ ಮಳಿಗೆಯಲ್ಲಿ ಗುರುವಾರ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ.

ಸಂಸ್ಥೆಯ ಮಾಲಕ ವಸಂತ್ ಬೆಳಗ್ಗೆ ಅಂಗಡಿ ಬಾಗಿಲು ತೆರೆದಿದ್ದು, ದೇವರಿಗೆ ದೀಪ ಹಚ್ಚುವ ವೇಳೆ ಆಕಸ್ಮಿಕವಾಗಿ ಕೈ ತಗಲಿ ದೀಪ ಕೆಳಗಿಟ್ಟಿದ್ದ ಬಾಕ್ಸ್ ಮೇಲೆ ಬಿದ್ದು ಬೆಂಕಿ ಹತ್ತಿಕೊಂಡಿದೆ. ಒಮ್ಮೆಲೆ ಬೆಂಕಿ ವ್ಯಾಪಿಸಿ ಹೊಗೆ ಆವರಿಸಿದೆ. ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಸಂತ್ ಅವರ ಕೈಗೆ ಸಣ್ಣಪುಟ್ಟ ಸುಟ್ಟ ಗಾಯವಾಗಿದೆ.




