ಉಪ್ಪಳ: ಕೊಂಡೆವೂರು ಮಠದಲ್ಲಿ ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ; ನಕ್ಷತ್ರವನದಲ್ಲಿ ದೀಪೋತ್ಸವ

Share with

ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ 18 ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಾ.24ರಂದು ಸೂರ್ಯಾಸ್ತದಿಂದ ಆರಂಭಗೊಂಡಿದ್ದು, ಈ ತಿಂಗಳ 31ರ ತನಕ ನಡೆಯಲಿದೆ.

ಕೊಂಡೆವೂರು ಮಠದಲ್ಲಿ ಅಖಂಡ ಭಜನಾ ಸಪ್ತಾಹಕ್ಕೆ ಚಾಲನೆ

ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲನೆ ಗೈಯುವುದರ ಮೂಲಕ ಚಾಲನೆ ನೀಡಿದರು. ಈ ಭಜನಾ ಮಹೋತ್ಸವದಲ್ಲಿ 180 ಕ್ಕೂ ಅಧಿಕ ಭಜನಾ ತಂಡಗಳು ಭಜನಾಸೇವೆ ಸಲ್ಲಿಸಲಿದ್ದಾರೆ.

ನಕ್ಷತ್ರವನದಲ್ಲಿ ದೀಪೋತ್ಸವ

ಮಾ.24 ಪ್ರತಿಷ್ಠೆಗೊಂಡ ನಕ್ಷತ್ರವನದ ನವಗ್ರಹ ಪರಿಸರದಲ್ಲಿ ಮಾತೆಯರು ಸಹಸ್ರಾರು ದೀಪ ಬೆಳಗುವುದರ ಮೂಲಕ ಸುಂದರವಾದ ದೀಪೋತ್ಸವ ಬಹಳ ವಿಜೃಂಭಣೆಯಿಂದ ಜರಗಿತು.


Share with

Leave a Reply

Your email address will not be published. Required fields are marked *