ಉಪ್ಪಳ: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ 18 ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಾ.24ರಂದು ಸೂರ್ಯಾಸ್ತದಿಂದ ಆರಂಭಗೊಂಡಿದ್ದು, ಈ ತಿಂಗಳ 31ರ ತನಕ ನಡೆಯಲಿದೆ.
ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲನೆ ಗೈಯುವುದರ ಮೂಲಕ ಚಾಲನೆ ನೀಡಿದರು. ಈ ಭಜನಾ ಮಹೋತ್ಸವದಲ್ಲಿ 180 ಕ್ಕೂ ಅಧಿಕ ಭಜನಾ ತಂಡಗಳು ಭಜನಾಸೇವೆ ಸಲ್ಲಿಸಲಿದ್ದಾರೆ.
ಮಾ.24 ಪ್ರತಿಷ್ಠೆಗೊಂಡ ನಕ್ಷತ್ರವನದ ನವಗ್ರಹ ಪರಿಸರದಲ್ಲಿ ಮಾತೆಯರು ಸಹಸ್ರಾರು ದೀಪ ಬೆಳಗುವುದರ ಮೂಲಕ ಸುಂದರವಾದ ದೀಪೋತ್ಸವ ಬಹಳ ವಿಜೃಂಭಣೆಯಿಂದ ಜರಗಿತು.