ಎ.13-18: ಐಲ ಕ್ಷೇತ್ರದಲ್ಲಿ ವಿಷು ಜಾತ್ರಾ ಮಹೋತ್ಸವ

Share with

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ವಿಷು ಜಾತ್ರಾ ಮಹೋತ್ಸವ ಎ.13ರಿಂದ 18ರ ತನಕ ನಡೆಯಲಿದೆ.

ವರ್ಷಾವಧಿ ವಿಷ್ಣು ಜಾತ್ರಾ ಮಹೋತ್ಸವ ಎ.13ರಿಂದ 18ರ ತನಕ ನಡೆಯಲಿದೆ.

13ರಂದು ಪೂರ್ವಾಹ್ನ 7ರಿಂದ ನಿತ್ಯ ಪೂಜೆ, ಹೂವಿನ ಪೂಜೆ, ಗಣಹೋಮ, ನವಕ ಕಲಶ, 10ರಿಂದ ಧ್ವಜಾರೋಹಣ, ಬಲಿ ಉತ್ಸವ, ಮಧ್ಯಾಹ್ನ 12.30ರಿಂದ ಹೂವಿನ ಪೂಜೆ, ಮಹಾಪೂಜೆ, ಬಲಿ ಉತ್ಸವ, ಅನ್ನಸಂತರ್ಪಣೆ, ಸಂಜೆ 5.30ರಿಂದ ಭಜನೆ, 6.30ರಿಂದ ದೀಪಾರಾಧನೆ, ಭಜನೆ, ರಾತ್ರಿ 7.30ರಿಂದ ಹೂವಿನ ಪೂಜೆ, ಮಹಾಪೂಜೆ, ಬಲಿ ಉತ್ಸವ ನಡೆಯಲಿದೆ.

14ರಂದು ಪ್ರಾತಕಾಲ 5.30ರಿಂದ ವಿಷುಕಣಿ ದರ್ಶನ, ಭಜನೆ, ಪೂರ್ವಾಹ್ನ 7ರಿಂದ ನಿತ್ಯಪೂಜೆ, ಹೂವಿನ ಪೂಜೆ, ಬಲಿ ಉತ್ಸವ, ಗಣಹೋಮ, ನವಕ ಕಲಶ, 9.30ರಿಂದ ಪಂಚಾಂಗ ಶ್ರವಣ, 10ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತಾರ್ಪಣಂ 11ಕ್ಕೆ ಭಜನೆ, ಮಧ್ಯಾಹ್ನ 12.30ರಿಂದ ಹೂವಿನ ಪೂಜೆ, ಮಹಾಪೂಜೆ, ಬಲಿ ಉತ್ಸವ, ಅನ್ನಸಂತರ್ಪಣೆ, 12.30ರಿಂದ ಯಕ್ಷಗಾನ ವೈಭವ, ಸಂಜೆ 6.30ರಿಂದ ದೀಪಾರಾಧನೆ, ರಾತ್ರಿ 7.30ರಿಂದ ಹೂವಿನ ಪೂಜೆ, ಮಹಾಪೂಜೆ, ಬಲಿ ಉತ್ಸವ, ರಾತ್ರಿ 8ರಿಂದ ಕಲ್ಜಿಗದ ಕಾಳಿ ಮಂತ್ರ ದೇವತೆ ನಾಟಕ ಪ್ರದರ್ಶನ ನಡೆಯಲಿದೆ.

15ರಂದು ಪೂರ್ವಾಹ್ನ 7ರಿಂದ ನಿತ್ಯಪೂಜೆ, ಹೂವಿನ ಪೂಜೆ, ಬಲಿ ಉತ್ಸವ, ಗಣಹೋಮ, ನವಕ ಕಲಶ, ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರ ತನಕ ವಿವಿಧ ತಂಡಗಳಿಂದ ಭಜನೆ, ಮಧ್ಯಾಹ್ನ 12.30ಕ್ಕೆ ಹೂವಿನ ಪೂಜೆ, ಮಹಾಪೂಜೆ, ಬಲಿ ಉತ್ಸವ, ಅನ್ನಸಂತರ್ಪಣೆ, ಸಂಜೆ 6.30ರಿಂದ ದೀಪಾರಾಧನೆ, ರಾತ್ರಿ 7.30ರಿಂದ ಹೂವಿನ ಪೂಜೆ, ಮಹಾಪೂಜೆ, ಮಾಗಣೆ ಕೂಟ, ಬಲಿ ಉತ್ಸವ ನಡುದೀಪೋತ್ಸವ, ರಾಜಾಂಗಣ ಪ್ರಸಾದ ನಡೆಯಲಿದೆ.

16ರಂದು ಪೂರ್ವಾಹ್ನ 7ರಿಂದ ನಿತ್ಯಪೂಜೆ, ಹೂವಿನ ಪೂಜೆ, ಬಲಿ ಉತ್ಸವ, ಗಣಹೋಮ, ನವಕ ಕಲಶ, ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರ ತನಕ ಭಜನೆ, ಮಧ್ಯಾಹ್ನ 12.30ರಿಂದ ಹೂವಿನ ಪೂಜೆ, ಮಹಾಪೂಜೆ, ಬಲಿ ಉತ್ಸವ, ಅನ್ನಸಂತರ್ಪಣೆ, 12.30ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5.30ರಿಂದ ಭಜನೆ, ಸಂಜೆ 6.30ರಿಂದ ದೀಪಾರಾಧನೆ, ರಾತ್ರಿ 7.30ರಿಂದ ಹೂವಿನ ಪೂಜೆ, ಮಹಾಪೂಜೆ, ಬಲಿ ಉತ್ಸವ, ರಜಾಂಗಣ ಪ್ರಸಾದ, ಕೆರೆದೀಪೋತ್ಸವ, ರಾತ್ರಿ 10ರಿಂದ ಐಲ ಮೈದಾನದಲ್ಲಿ ವಿವಿಧ ಕುಣಿತ ಭಜನಾ ತಂಡಗಳ ಸಮ್ಮಿಲನದೊಂದಿಗೆ ಏಕಕಾಲದಲ್ಲಿ ವಿರಾಟ್ ನೃತ್ಯ ಭಜನಾ ಸಂಭ್ರಮ, ಕಟ್ಟೆಪೂಜೆ, ಸಾರ್ವಜನಿಕ ಬೆಡಿ ಉತ್ಸವ, ರಾತ್ರಿ 10ರಿಂದ ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ನಾಟಕ ಪ್ರದರ್ಶನ, ರಾತ್ರಿ 12.30ರಿಂದ ಕವಾಟ ಬಂಧನ ನಡೆಯಲಿದೆ.

17ರಂದು ಪೂರ್ವಾಹ್ನ 7ರಿಂದ ಕವಾಟೋದ್ಘಾಟನೆ, ಅಭಿಷೆಕ, ಪೂಜೆ, ಪ್ರಸಾದ, ಬೆಳಿಗ್ಗೆ 9.30ರಿಂದ ತುಲಾಭಾರ ಸೇವೆ, ಭಜನೆ, ಮಧ್ಯಾಹ್ನ 12.30ರಿಂದ ಹೂವಿನ ಪೂಜೆ, ನಿತ್ಯಪೂಜೆ, ಅನ್ನಸಂತರ್ಪಣೆ, ಸಂಜೆ 4ರಿಂದ ಆರಾಟೋತ್ಸವ, ರಾಜಾಂಗಣ ಪ್ರಸಾದ, ಕುಬಣೂರು ಶ್ರೀ ಶಾಸ್ತಾವು ಕ್ಷೇತ್ರಕ್ಕೆ ಶ್ರೀ ದೇವರು ಅವಭೃತ ಸ್ನಾನಕ್ಕೆ ಹೊರಡುವುದು, ಸಂಜೆ 5ರಿಂದ ರಾತ್ರಿ 9ರ ತನಕ ಭಜನೆ, ಸಂಜೆ 6.30ರಿಂದ ಮೈತಿದಿ ನಾಟಕ ಪ್ರದರ್ಶನ, 10ರಿಂದ ಧ್ವಜಾವರೋಹಣ ನವಕ ಕಲಶ, ಸಂಪ್ರೋಕ್ಷಣೆ ನಡೆಯಲಿದೆ.

18ರಂದು ಸಂಜೆ 5ರಿಂದ ಶ್ರೀ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ, ರಾತ್ರಿ 7ರಿಂದ ಕಥೆ ಎಡ್ಡೆಂಡು ನಾಟಕ ಪ್ರದರ್ಶನ ನಡೆಯಲಿದೆ.


Share with

Leave a Reply

Your email address will not be published. Required fields are marked *