ಅರಿಬೈಲು ಶ್ರೀನಾಗಬ್ರಹ್ಮ ಕ್ಷೇತ್ರದ ಪ್ರಧಾನ ಅರ್ಚಕ ನಿಧನ

Share with

ಮಂಜೇಶ್ವರ: ಅರಿಬೈಲು ಶ್ರೀ ನಾಗಬ್ರಹ್ಮ ದೇವಸ್ಥಾನದ ಪ್ರಧಾನ ಅರ್ಚಕರು, ಆಡಳಿತ ಮೊಕ್ತೇಸರರೂ ಆದ ಅರಿಬೈಲು ನಿವಾಸಿ ಎ. ರಾಧಾಕೃಷ್ಣ ಅರಿನಾಯ [೮೦] ಹೃದಯಘಾತದಿಂದ ಬೆಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತ್ನಿ ಕುಸುಮ, ಮಕ್ಕಳಾದ ಸೌಮ್ಯ, ಸುಹಾಸ್, ಅಳಿಯ ಚೇತನ್, ಸಹೋದರ ರಾಮ್‌ಮೋಹನ್, ಸಹೋದರಿ ಸುಧಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಸಂತಾಪ ಸೂಚಿಸಿದ್ದಾರೆ.


Share with

Leave a Reply

Your email address will not be published. Required fields are marked *