ಮಜೀರ್ ಪಳ್ಳ ದಲ್ಲಿ ಬಿ. ಎಂ. ಎಸ್  ಮಂಜೇಶ್ವರ, ಕುಂಬಳೆ  ವಲಯ  ಸಮಿತಿ ವತಿಯಿಂದ ವಿಶ್ವಕರ್ಮ ಜಯಂತಿ  ಕಾರ್ಯಕ್ರಮ

Share with


ಮಂಜೇಶ್ವರ :ಭಾರತೀಯ ಮಜ್ಡೂರ್ ಸಂಘ (ಬಿ. ಎಂ. ಎಸ್ )ಮಂಜೇಶ್ವರ. ಹಾಗೂ ಕುಂಬಳೆ ವಲಯ ಸಮಿತಿಯ ಜಂಟಿ ಆಶ್ರಯದಲ್ಲಿ  ಸಪ್ತಂಬರ್  17 ವಿಶ್ವಕರ್ಮ ಜಯಂತಿ   ರಾಷ್ಟೀಯ ಕಾರ್ಮಿಕ ದಿನ ಕಾರ್ಯಕ್ರಮವನ್ನು ಕಾರ್ಮಿಕರ ಬ್ರಹತ್ ಮೆರವಣಿಗೆಯೊಂದಿಗೆ ಆಚರಿಸಲಾಯಿತು.  ವರ್ಕಾಡಿ ಪಂಚಾಯತ್ ನ ಬೇಕರಿ ಜಂಕ್ಷನ್ ನಿಂದ ಕಾರ್ಮಿಕರ ಬ್ರಹತ್ ಮೆರವಣಿಗೆ ನಡೆಸಿ ನಂತರ ಮಜೀರ್ ಪಳ್ಳ ದಲ್ಲಿ ಸಾರ್ವಜನಿಕ ಸಬೆ ನಡೆಯಿತು. ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು   ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೋಟೆಕಣಿ ಉದ್ಘಾಟನೆ ಮಾಡಿದರು.ಅವರು ಕೇರಳ ಸರಕಾರ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ನೀಡದೆ ವಂಚಿಸುದನ್ನು ಟೀಕಿಸಿದರು ಅಲ್ಲದೆ ವಯನಾಡು ದುರಂತದ ನಂತರ ನಡೆದ ದುರಸ್ಥಿ ಕಾರ್ಯದ ಖರ್ಚ್ ವೆಚ್ಚವನ್ನು ಜನರ ಮುಂಧಿಡಬೇಕೆಂದು ಅಭಿಪ್ರಾಯ ಪಟ್ಟರು. ಜಿಲ್ಲಾ ಪದಾಧಿಕಾರಿಗಳಾದ ಹರೀಶ್ ಕುದ್ರೆಪ್ಪಾಡಿ. ಯಶವಂತಿ ಬೆಜ್ಜ. ಬಾಬು ಮೊನ್ ಚೆರ್ಕಳ ಎಂಬವರು ಶುಭಾಷಂಷಣೆ ಗೆಯ್ದರು.  ಜಿಲ್ಲಾ ಸಮಿತಿ ಸದಸ್ಯೆ ಶೋಭ ಏನ್ ನಾಯ್ಕಪ್. ಮಂಜೇಶ್ವರ ವಲಯ ಅಧ್ಯಕ್ಷ ರವಿ ಎಂ ಕೆ. ಮಿತ್ತ ಕೊಲ್ಯೂರ್. ಕುಂಬಳೆ ವಲಯ ಅಧ್ಯಕ್ಷ. ವೇಣುಗೋಪಾಲ್ ಮುಗು. ಕಾರ್ಯದರ್ಶಿ. ಶಶಿಧರ ಕುಂಟಗೇರಡ್ಕ. ನಿರ್ಮಾಣ ಕಾರ್ಮಿಕ ಸಂಘ ಜಿಲ್ಲಾ ಜೊತೆ ಕಾರ್ಯದರ್ಶಿ ಚಂದ್ರಶೇಖರ ವರ್ಕಾಡಿ. ಉಪಸ್ಥಿತರಿದ್ದರು. ವೇಣುಗೋಪಾಲ್ ಮುಗು ಸ್ವಾಗತ ನೀಡಿ, ಐತಪ್ಪ ನಾರಾಯಣಮಂಗಲ ಧನ್ಯವಾದ ನೀಡಿದರು. ಕಾರ್ಯಕ್ರಮವನ್ನು ಶಿವಾನಂದ ರಾವ್ ನಿರೂಪಿಸಿದರು.


Share with

Leave a Reply

Your email address will not be published. Required fields are marked *