ಬೆಂಗಳೂರು: ರಸ್ತೆ, ಫುಟ್ಪಾತ್ಗಳಲ್ಲಿ ರಾಶಿ ರಾಶಿ ಕಸ; ಜಿಬಿಎ ನಿರ್ಲಕ್ಷ್ಯಕ್ಕೆ ಜನರು ಪರದಾಟ

Share with

ಬೆಂಗಳೂರು, ಅಕ್ಟೋಬರ್ 15: ಗಾರ್ಡನ್ ಸಿಟಿ ಬೆಂಗಳೂರಿನ (bangaluru) ಗಲ್ಲಿ ಗಲ್ಲಿಯಲ್ಲೂ ಗಾರ್ಬೆಜ್ (garbage) ಸಮಸ್ಯೆ ಎದುರಾಗಿದ್ದು, ಬ್ರ್ಯಾಂಡ್ ಬೆಂಗಳೂರನ್ನ ಬ್ಯಾಡ ಕಂಡೀಷನ್ಗೆ ನೂಕಿದಂತಾಗಿದೆ. ರಾಜಧಾನಿಯ ರಸ್ತೆಗಳಲ್ಲಿ, ಫುಟ್ ಪಾತ್ಗಳಲ್ಲಿ ಕಸದ ರಾಶಿ ಬಿದ್ದಿದ್ದರೂ ತೆರವು ಮಾಡುವುದರಲ್ಲಿ ಜಿಬಿಎ ನಿರ್ಲಕ್ಷ್ಯವಹಿಸಿದರೆ, ಇತ್ತ ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವ ಕೆಲಸ ಕೂಡ ಕೆಲವೆಡೆ ವಿಳಂಬವಾಗುತ್ತಿರುವುದು ಸಿಟಿಯಲ್ಲಿ ಕಸದ ಸಮಸ್ಯೆ ತಲೆದೂರುವಂತೆ ಮಾಡಿದೆ. ಗಾರ್ಡನ್ ಸಿಟಿಯಲ್ಲಿ ಗಾರ್ಬೆಜ್ ಸಂಕಷ್ಟ ಎದುರಾಗಿರುವುದು ಟಿವಿ9 ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ.

ಬ್ರ್ಯಾಂಡ್ ಬೆಂಗಳೂರಿನ ಹಲವು ಏರಿಯಾಗಳ ರಸ್ತೆಗಳಲ್ಲಿ ಸದ್ಯ ರಾಶಿ ರಾಶಿ ಕಸ ಕಂಡುಬರುತ್ತಿದೆ. ಬೆಂಗಳೂರನ್ನ ಕ್ಲೀನ್ ಸಿಟಿ ಮಾಡುತ್ತೇವೆ ಎಂದು ಹೇಳುವ ಜಿಬಿಎ, ಘನತ್ಯಾಜ್ಯ ನಿರ್ವಹಣಾ ನಿಗಮ ಕಸ ವಿಲೇವಾರಿ ಮಾಡದೇ ಕಣ್ಮುಚ್ಚಿ ಕುಳಿತಿದ್ದರೆ ಇತ್ತ ರಸ್ತೆಬದಿಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವ ಕೆಲಸ ಹೆಚ್ಚಾಗುತ್ತಿದೆ. ರಾಜಧಾನಿಯಲ್ಲಿ ಬ್ಲಾಕ್ ಸ್ಪಾಟ್ಗಳ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ.

ಇನ್ನು ಬೆಂಗಳೂರಿನ ಹಲವೆಡೆ ಮುಖ್ಯರಸ್ತೆಗಳಲ್ಲಿ ಕಸದರಾಶಿ ಬಿದ್ದಿದ್ದು, ಜನರು ಓಡಾಡುವುದಕ್ಕೂ ಆಗದ ಸ್ಥಿತಿ ತಂದಿಟ್ಟಿದೆ. ಕಾಮಾಕ್ಷಿಪಾಳ್ಯ ಮುಖ್ಯರಸ್ತೆಯಲ್ಲಿ ಅರ್ಧರಸ್ತೆಯೇ ಕಸದಿಂದ ಮುಚ್ಚಿಹೋಗಿದ್ದು, ತ್ಯಾಜ್ಯ ತುಂಬಿದ ರಸ್ತೆಗಳು ಐಟಿ ಸಿಟಿಯ ಅಂದಕ್ಕೆ ಕಪ್ಪುಚುಕ್ಕೆ ಇಟ್ಟಂತಾಗಿದೆ. ಕಾಮಾಕ್ಷಿಪಾಳ್ಯ, ಮಾಗಡಿ ರಸ್ತೆ, ಸುಂಕದಕಟ್ಟೆ ಹಾಗೂ ಜ್ಞಾನಜ್ಯೋತಿನಗರ ಸುತ್ತಮುತ್ತ ಕಸದರಾಶಿ ಗಬ್ಬೆದ್ದುನಾರುತ್ತಿದೆ.

ಬ್ಲಾಕ್ ಸ್ಪಾಟ್ಗಳ ಸಂಖ್ಯೆ ಏರಿಕೆ
ಸದ್ಯ ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಕಸ ಸಂಗ್ರಹ ಮಾಡುವ ವಾಹನಗಳು ಕೂಡ ಸರಿಯಾಗಿ ಮನೆ ಮನೆಗೆ ಬಂದು ಕಸ ಸಂಗ್ರಹ ಮಾಡುತ್ತಿಲ್ಲ ಅನ್ನೋ ಆರೋಪ ಕೇಳಿಬರುತ್ತಿದೆ. ಇದರಿಂದ ಸಿಟಿ ಮಂದಿ ರಸ್ತೆಬದಿಯಲ್ಲಿ ಕಸ ಎಸೆದುಹೋಗ್ತಿರೋದು ರಾಜಧಾನಿಯ ರಸ್ತೆಗಳಲ್ಲಿ ಬ್ಲಾಕ್ ಸ್ಪಾಟ್ಗಳ ಸಂಖ್ಯೆ ಕೂಡ ಏರಿಕೆಯಾಗುವಂತೆ ಮಾಡಿದೆ.

ಸರ್ಕಾರದ ವಿರುದ್ಧ ಸಿಟಿ ಮಂದಿ ಆಕ್ರೋಶ
ಇತ್ತ ಟ್ಯಾಕ್ಸ್ ಮಾತ್ರ ಬಿಡದೇ ವಸೂಲಿ ಮಾಡುವ ಸರ್ಕಾರ ಕಸವನ್ನ ಮಾತ್ರ ವಿಲೇವಾರಿ ಮಾಡುವ ಬಗ್ಗೆ ನಿಗಾ ವಹಿಸದಿರುವುದಕ್ಕೆ ಸಿಟಿ ಮಂದಿ ಆಕ್ರೋಶ ಹೊರಹಾಕುತ್ತಿದ್ದಾರೆ. ಕಸ ಸಂಗ್ರಹ ಮಾಡುವುದನ್ನ ಸರಿಯಾಗಿ ಮಾಡದೇ ಬ್ರ್ಯಾಂಡ್ ಬೆಂಗಳೂರು ಹೇಗಾಗುತ್ತೆ? ಮಕ್ಕಳು, ವಯೋವೃದ್ಧರು ಓಡಾಡುವುದಕ್ಕೆ ಆಗದಂತೆ ರಸ್ತೆಗಳಲ್ಲಿ ಕಸ ಸುರಿಯೋದಕ್ಕೆ ಬ್ರೇಕ್ ಹಾಕಿ ರಸ್ತೆಬದಿಗಳಲ್ಲಿ ಕಸ ತೆರವು ಮಾಡುವಂತೆ ಸ್ಥಳೀಯರಾದ ಅನಿತಾ ಎಂಬುವವರು ಆಗ್ರಹಿಸಿದ್ದಾರೆ.


Share with

Leave a Reply

Your email address will not be published. Required fields are marked *