ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11)ದಲ್ಲಿ ಈ ವಾರ ಕಿಚ್ಚ ಸುದೀಪ್ ಅವರ ವೀಕೆಂಡ್ ಎಪಿಸೋಡ್ ಶೂಟಿಂಗ್ ಇರಲ್ಲ. ಅವರ ಬದಲಾಗಿ ಬೇರೆಯವರು ಶೋ ನಡೆಸಿಕೊಡಲಿದ್ದಾರೆ.
ತಾಯಿಯ ನಿಧನದಿಂದ ನೊಂದಿರುವ ಕಿಚ್ಚ ಸುದೀಪ್ (Kiccha Sudeep) ಈ ವಾರ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಜಾಗಕ್ಕೆ ಈ ವಾರ ಬೇರೆ ಕಲಾವಿದರು ಶೋ ನಡೆಸಿಕೊಡಲಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡ ಶನಿವಾರದ ಪ್ರೋಮೊ ರಿಲೀಸ್ ಮಾಡಿದ್ದು, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳ ಜತೆ ಬೆರೆತುಕೊಂಡು ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಸ್ಪರ್ಧಿಗಳನ್ನು ನಗಿಸುತ್ತಾ, ಅವರ ವ್ಯಕ್ತಿತ್ವದ ಬಗ್ಗೆ ಭಟ್ರು ಮಾತನಾಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ನಾಳೆ ಯಾರು ನಡೆಸಿಕೊಡ್ತಾರೆ ಶೋ..?
ಪ್ರತಿ ಸಂಡೆ ನಡೆಯುತ್ತಿದ್ದ ಸೂಪರ್ ಸಂಡೇ ವಿತ್ ಕಿಚ್ಚ ಕೂಡ ಈ ವಾರ ಇರುವುದಿಲ್ಲ. ಭಾನುವಾರದ ಕಾರ್ಯಕ್ರಮವನ್ನು ಖ್ಯಾತ ನಿರೂಪಕ ಸೃಜನ್ ಲೋಕೇಶ್ ಅವರು ಕಡೆಸಿಕೊಡಲಿದ್ದಾರೆ ಎನ್ನಲಾಗಿದೆ. ಸೃಜನ್ ಅವರಿಗೆ ಬಿಗ್ ಬಾಸ್ ಮನನೆಯ ಆಟ ಹೇಗಿರುತ್ತದೆ ಎನ್ನುವುದು ಗೊತ್ತಿದೆ. ಸೃಜನ್ ಲೋಕೇಶ್ ಈ ಹಿಂದೆ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು.
ಭವ್ಯಾ, ಚೈತ್ರ, ಗೌತಮಿ, ಹಂಸ, ಮಂಜು, ಮಾನಸ, ಮೋಕ್ಷಿತಾ, ಶಿಶಿರ್ ಮತ್ತು ಗೋಲ್ಡ್ ಸುರೇಶ್ ಇವರುಗಳ ಪೈಕಿ ಇದೇ ವೇಳೆ ಮನೆಯಿಂದ ಆಚೆ ಬರಲಿದ್ದಾರೆ.