ದಲಿತ ವಿದ್ಯಾರ್ಥಿ ಪರಿಷತ್(ರಿ) ರಾಜ್ಯ ಘಟಕ ಬೆಂಗಳೂರು ಇವರು ನೀಡುವಂತಹ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಭಾಜನರಾದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಶಾಲೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ (GPT) ಶ್ರೀ ಸೌಮ್ಯಲತಾ ರಾವ್.



ವಿಜಯಪುರದ(ವಿಜಾಪುರ) ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜ.3ರಂದು ನಡೆದಂತಹ ಭಾರತದ ಮೊದಲ ಶಿಕ್ಷಕಿ ಶ್ರೀ ಸಾವಿತ್ರಿಬಾಯಿ ಪುಲೆರವರ ಜನ್ಮದಿನ ಆಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.




