ಬಿಜೆಪಿ ಕಯ್ಯಾರು 114ನೇ ಬೂತ್ ಕಾರ್ಯಕರ್ತರ ಸಭೆ

Share with

ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವ ರವರ ವಿಜಯಕ್ಕಾಗಿ ಬಿಜೆಪಿ ಕಯ್ಯಾರು ೧೧೪ನೆ ಬೂತ್ ಸಮಿತಿ ಕಾರ್ಯಕರ್ತರ ಸಭೆ ಜೋಡುಕಲ್ಲು ಸಭಾಂಗಣದಲ್ಲಿ ನಡೆಯಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ವಿ.ರವೀಂದ್ರನ್ ಕಾರ್ಯಕರ್ತರನ್ನು ಉದ್ದೇಷಿಸಿ ಮಾತನಾಡಿದರು. ಬೂತ್ ಅಧ್ಯಕ್ಷ ಗಣೇಶ ಆಳ್ವ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಪೈವಳಿಕೆ ಪಂಚಾಯತ್ ಅಧ್ಯಕ್ಷ ಲೊಕೇಶ್ ನೊಂಡಾ, ಬೂತ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಪಟ್ಲ, ಹಿರಿಯ ಮುಖಂಡರಾದ ಕೆ.ಪಿ ನಾರಾಯಣ ಪಟ್ಲಹಾಗೂ ಬೂತ್ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದರು.


Share with

Leave a Reply

Your email address will not be published. Required fields are marked *