ಕಾಸರಗೋಡು: ಕೇಂದ್ರ ಸರಕಾರದ ಜನಪರ ಹಾಗೂ
ಜನ ಕ್ಷೇಮ ಅಭಿವೃದ್ಧಿ ಯೋಜನೆಗಳನ್ನು ಬುಡಮೇಲುಗೊಳಿಸುತ್ತಿರುವ ಕೇರಳದ ಪಿಣರಾಯಿ ಸರಕಾರದ ವಿರುದ್ಧ ಬಿಜೆಪಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಆಯೋಜಿಸಿದ ಪ್ರತಿಭಟನೆ ಧರಣಿ ಸತ್ಯಾಗ್ರಹವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಉಪಾಧ್ಯಕ್ಷ ಎಂ. ಬಲರಾಜ್ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಪಿ.ಆರ್. ಸುನಿಲ್, ಪುಷ್ಪಾ ಗೋಪಾಲನ್, ಸವಿತಾ ಟೀಚರ್, ಮಧೂರು ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ, ಬೆಳ್ಳೂರು ಪಂ. ಅಧ್ಯಕ್ಷ ಶ್ರೀಧರ್ ಬೆಳ್ಳೂರು, ಸತೀಶ್ಚಂದ್ರ ಭಂಡಾರಿ ಮತ್ತಿತರರು ಮಾತನಾಡಿದರು.





