ಉಪ್ಪಳ: ವಿಧಾನ ಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ವಿಜಯಿ: ಪ್ರತಾಪನಗರದಲ್ಲಿ ವಿಜಯೋತ್ಸವ

Share with

ಉಪ್ಪಳ: ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮಧ್ಯ ಪ್ರದೇಶ, ರಾಜಸ್ಥಾನ, ಛತ್ತೀಸ್‌ಗಡ್ ಮೂರು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಭಾರತೀಯ ಜನತಾ ಪಕ್ಷ ಬಹುಮತ ಗಳಿಸಿದ ಪ್ರಯುಕ್ತ ಭಾರತೀಯ ಜನತಾ ಪಕ್ಷ ಪ್ರತಾಪ ನಗರದಲ್ಲಿ ಬಿಜೆಪಿ ಹಾಗೂ ಯುವ ಮೋರ್ಚ ಕಾರ್ಯಕರ್ತರು ನ.3ರಂದು ವಿಜಯೋತ್ಸವವನ್ನು ಆಚರಿಸಿದರು.

ಬಿಜೆಪಿ ಹಾಗೂ ಯುವ ಮೋರ್ಚ ಕಾರ್ಯಕರ್ತರು ವಿಜಯೋತ್ಸವವನ್ನು ಆಚರಿಸಿದರು.

ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ, ಪಕ್ಷ ಕ್ಕೆ ಜಯಕಾರ ಹಾಕಿ ಆಚರಿಸಲಾಯಿತು, ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ ಕಾರ್ಯದರ್ಶಿ, ಧನರಾಜ್, ಗಣೇಶ್ ಕೆ ಯನ್, ವಲ್ಸರಾಜ್, ಶ್ರೀಜಿತ್, ಪ್ರವೀಣ್, ರವೀಶ, ಮೋಹನ, ಸಂತೋಷ್, ಲೀಲಾಧರ, ಜಯರಾಜ್, ಅವಿನಾಶ್, ಉದಯ ಶಂಕರ್, ಚೇತನ್ ಮುಂತಾದ ಕಾರ್ಯಕರ್ತರು ಭಾಗವಹಿಸಿದರು.


Share with

Leave a Reply

Your email address will not be published. Required fields are marked *