ಉಪ್ಪಳ: ಸಬ್ ಜೂನಿಯರ್ ವಿಭಾಗದ ಕಬ್ಬಡ್ಡಿ ಪಂದ್ಯಾಟ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸರಣ್ಯ ಸಿ.ಎಸ್.ರವರಿಗೆ ಬಿ.ಎಂ.ಎಸ್ ವತಿಯಿಂದ ಸನ್ಮಾನ

Share with

ಉಪ್ಪಳ: ಪಾಲಕ್ಕಾಡ್ ನಲ್ಲಿ ನಡೆದ ರಾಜ್ಯಮಟ್ಟದ ಸಬ್ ಜೂನಿಯರ್ ವಿಭಾಗದ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಜಯಿಯಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಾಸರಗೋಡು ಬಿ.ಎಂ.ಎಸ್ ತಲೆಹೊರೆ ಕಾರ್ಮಿಕ ಶ್ರೀಧರ ಚೇನಕ್ಕೋಡ್ ರವರ ಪುತ್ರಿ ಸರಣ್ಯ ಸಿ.ಎಸ್. ರವರಿಗೆ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಬಿ.ಎಂ.ಎಸ್ ವತಿಯಿಂದ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಶಾಲು ಹೊದಿಸಿ ಅಭಿನಂದನೆ ಸಲ್ಲಿ ಸಲ್ಲಿಸಿದರು.

ಕಬ್ಬಡ್ಡಿ ಪಂದ್ಯಾಟದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಸರಣ್ಯ ಸಿ.ಎಸ್.ರವರಿಗೆ ಬಿ.ಎಂ.ಎಸ್ ವತಿಯಿಂದ ಸನ್ಮಾನ.

ಈ ವೇಳೆಯಲ್ಲಿ ಬಿ.ಎಂ.ಎಸ್ ಕಾಸರಗೋಡು ವಲಯ ಕಾರ್ಯದರ್ಶಿ ರಿಜೇಶ್ ಜೆ.ಪಿ ನಗರ್. ಶಿವನ್ ತಾಳಿಪಡಪ್, ಬಾಬು ಮೊನ್ ಚೆರ್ಕಳ, ರಂಜಿತ್ ಬೇವಿಂಜೆ. ಪುಷ್ಪರಾಜ್ ಕೊರಕ್ಕೊಡ್ ಹಾಗೂ ಹಲವಾರು ಕಾರ್ಯಕರ್ತರು ಭಾಗವಹಿಸಿದರು.


Share with

Leave a Reply

Your email address will not be published. Required fields are marked *