ಬಂಗ್ರಮಂಜೇಶ್ವರ ಕ್ಷೇತ್ರದಿಂದ ಮಕ್ಕಳಿಗೆ ವಿತರಿಸುವ ಪುಸ್ತಕ ಪ್ರಾಂತ್ಯಗಳಿಗೆ ಹಸ್ತಾಂತರ

Share with

ಮoಜೇಶ್ವರ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನದ ವತಿಯಿಂದ ಮಕ್ಕಳಿಗೆ ವರ್ಷಂಪ್ರತಿ ವಿತರಿಸುವ ಪುಸ್ತಕಗಳನ್ನು ಶ್ರೀ ಕ್ಷೇತ್ರದಲ್ಲಿ ವಿವಿಧ ಪ್ರಾಂತ್ಯಗಳಿಗೆ ಹಸ್ತಾಂತರಿಸಲಾಯಿತು. ಮಂಗಳೂರು, ಮಂಜೇಶ್ವರ, ಬಾಯಾರು, ಮಂಗಲ್ಪಾಡಿ, ಕಾಸರಗೋಡು, ಪುತ್ತೂರು ಪ್ರಾಂತ್ಯಗಳ ಮೊಕ್ತೇಸರರು ಪುಸ್ತಕವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ಪ್ರಕಾಶ್ಚಂದ್ರ ಶ್ರೌತಿ, ಕ್ಷೇತ್ರದ ಅಧ್ಯಕ್ಷ ಬಿ.ಎಂ ಯದುನಂದನ ಆಚಾರ್ಯ ಕಡಂಬಾರು, ಪ್ರಧಾನ ಮೊಕ್ತೇಸರ ಉಳುವಾರು ವೆಂಕಟ್ರಮಣ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಆಚಾರ್ಯ ಪ್ರತಾಪನಗರ, ಕೋಶಾಧಿಕಾರಿ ಸತ್ಯಮೂರ್ತಿ ಆಚಾರ್ಯ ಉದ್ಯಾವರ, ಜತೆ ಕಾರ್ಯದರ್ಶಿ ನಾಗರಾಜ ಆಚಾರ್ಯ ಕಾಸರಗೋಡು ಇವರು ವಿವಿಧ ಪ್ರಾಂತ್ಯ ಮೊಕ್ತೇಸರುಗಳಾದ ರಾಮಚಂದ್ರ ಆಚಾರ್ಯ, ಎಂ.ಆರ್ ಹರೀಶ ಆಚಾರ್ಯ, ಎಸ್.ಕೆ ಮೋಹನದಾಸ್ ಆಚಾರ್ಯ, ವಿವೇಕ್ ಆಚಾರ್ಯ, ಗಣೇಶ ಆಚಾರ್ಯ, ಜಯಂತ ಆಚಾರ್ಯ ಕಡಂಬಾರು, ಮಂಜೇಶ್ವರ ಪ್ರಾಂತ್ಯ ಅಧ್ಯಕ್ಷ ಬಿ.ಎಂ ಅನಂತ ಆಚಾರ್ಯ ರವರಿಗೆ ಪುಸ್ತಕವನ್ನು ಹಸ್ತಾಂತರಿಸಿದರು.


Share with

Leave a Reply

Your email address will not be published. Required fields are marked *