ಪೈವಳಿಕೆ: ರಸ್ತೆಗೆ ಆವರಿಸಿಕೊಂಡಿರುವ ಪೊದೆಗಳು; ವಾಹನ ಸವಾರರಲ್ಲಿ ಆತಂಕ

Share with

ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಬಾಯಾರುಪದವ್-ಧರ್ಮತ್ತಡ್ಕ, ಸರ್ಕುತ್ತಿ ಕನಿಯಾಲ, ಬಳ್ಳೂರು ರಸ್ತೆಗಳ ವಿವಿಧೆಡೆ ಇಕ್ಕೆಡೆಗಳಲ್ಲಿ ಮರದ ರೆಂಬೆ ಹಾಗೂ ಪೊದೆಗಳು ರಸ್ತೆಗೆ ಆವರಿಸಿ ಬಸ್ ಸಹಿತ ವಾಹನ ಸಂಚಾರಕ್ಕೆ ಆತಂಕ ಉಂಟಾಗುತ್ತಿರುವುದಾಗಿ ವಾಹನ ಸವಾರರು ದೂರಿದ್ದಾರೆ.

ಮರದ ರೆಂಬೆ ಹಾಗೂ ಪೊದೆಗಳು ರಸ್ತೆಗೆ ಆವರಿಸಿ ಬಸ್ ಸಹಿತ ವಾಹನ ಸಂಚಾರಕ್ಕೆ ಆತಂಕ

ದಿನನಿತ್ಯ ಬಸ್ ಸಹಿತ ನೂರಾರು ವಾಹನಗಳು ಸಂಚಾರ ನಡೆಸುತ್ತಿದೆ. ಎದುರಿನಿಂದ ಬರುವ ವಾಹನಗಳಿಗೆ ಸೈಡು ನೀಡಲು ಪೊದೆಗಳು ಅಡ್ಡಿ ಉಂಟಾಗುತ್ತಿದ್ದು, ಕೆಲವು ಕಡೇಗಳಲ್ಲಿ ರಸ್ತೆ ಬದಿಯಲ್ಲಿ ಬೃಹತ್ ಹೊಂಡಯಿದ್ದು ಅಪಾಯಕ್ಕೆ ಕಾರಣವಾಗುತ್ತಿರುವುದಾಗಿ ಸವಾರರು ತಿಳಿಸಿದ್ದಾರೆ.

ಲೊಕೋಪಯೋಗಿ ಇಲಖೆಗೆ ಹಾಗೂ ಪಂಚಾಯತ್‌ಗೆ ಸೇರಿದ ರಸ್ತೆಗಳು ಒಳಗೊಂಡಿದೆ. ಸರ್ಕುತ್ತಿ ಕನಿಯಾಲ ಮಧ್ಯೆ ಕೆಲವು ಕಡೆಗಳಲ್ಲಿ ಸ್ಥಳಿಯರು ಸೇರಿ ಪೊದೆಗಳನ್ನು ಕಡಿದು ಶುಚೀಕರಣಗೊಳಿಸಲಾಗಿದೆ. ಇನ್ನೂ ಬಾಕಿಯಿರುವ ಪೊದೆಗಳನ್ನು ಸಂಬಂಧಪಟ್ಟ ಅಧಿಕೃತರು ಸಂಪೂರ್ಣ ಕಡಿದು ಶುಚೀಕರಿಸಿ ವಾಹನ ಸಂಚಾರವನ್ನು ಸುಗಮವಾಗಿಸಬೇಕೆಂದು ವಾಹನ ಸವಾರರು, ಸಿಬ್ಬಂದಿಗಳು ಒತ್ತಾಯಿಸಿದ್ದಾರೆ.


Share with

Leave a Reply

Your email address will not be published. Required fields are marked *