ಉಪ್ಪಳ : ಕೊರಗ ಸಮಾಜ ಸಂಗಮ ಸಮಿತಿ ಕಾಸರಗೋಡು ಇದರ ವತಿಯಿಂದ “ಕೊರಗ ಸಮಾಜ ಸಂಗಮ” ಪ್ರಯುಕ್ತ ಕ್ರೀಡಾಸಕ್ತರಿಗಾಗಿ ಡಿ.24 ಮತ್ತು 25ರಂದು ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಕ್ರೀಡೋತ್ಸವವನ್ನು ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು ಮಠದಲ್ಲಿ ಹಮ್ಮಿಕೊಂಡಿದ್ದು, ಇದರ ಉದ್ಘಾಟನಾ ಕಾರ್ಯಕ್ರಮ ಡಿ.24 ರಂದು ಅದಿತ್ಯವಾರ ಬೆಳಿಗ್ಗೆ 9.30 ಕ್ಕೆ ನಡೆಯಲಿದೆ.
ಕ್ರೀಡೋತ್ಸವದ ಪ್ರಯುಕ್ತ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ಪುರುಷರ ಕಬ್ಬಡ್ಡಿ, ಪುರುಷರಿಗೆ ಹಾಗೂ ಮಹಿಳೆಯರಿಗೆ ಹಗ್ಗ-ಜಗ್ಗಾಟ, ಗುಂಡು ಎಸೆತ, ಹೂ ಕಟ್ಟುವುದು, ಲಿಂಬೆ ಚಮಚ ಆಟ, ಹಾಳೆ ಎಳೆಯುವುದು (ದಂಪತಿಗಳಿಗೆ), ಸಂಗೀತ ಕುರ್ಚಿ, ಬುಟ್ಟಿ ಹೆಣೆಯುವುದು, ಬಾಟಲಿಗೆ ನೀರು ತುಂಬಿಸುವುದು, ಕ್ರಿಕೆಟ್ ಮುಂತಾದ ಆಟಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.