ಮಂಜೇಶ್ವರ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕಿನಿಂದ ಕೇರಳ ಸರಕಾರ ಕೊಡಲ್ಪಟ್ಟ ರಿಸ್ಕ್ ಫಂಡ್ ನ್ನು ಇತ್ತೀಚೆಗೆ ಬ್ಯಾಂಕಿನ ಅಧ್ಯಕ್ಷರಾದ ಮೊಹಮ್ಮದ್ ಹನೀಫ್ ರವರು ಬಾಕಿಮಾರಿನ ಖಾದರ್ ಪಿ.ಕೆ ಇವರ ಪರವಾಗಿ ಅವರ ಮಗನಾದ ಅಬ್ದುಲ್ಅಜೀಜ್ ಇವರಿಗೆ ರೂಪಾಯಿ ಒಂದು ಲಕ್ಷದ ಚಕ್ ನ್ನೂ ನೀಡಿದರು .ಆಡಳಿತ ಮಂಡಳಿ ಪರವಾಗಿ ಉಪಾಧ್ಯಕ್ಷರಾದ ಸತ್ಯನಾರಾಯಣ ಭಟ್, ತುಳಸಿ ಕುಮಾರಿ, ರಬಿಯಾ ಇಸ್ಮಾಯಿಲ್ ಹಾಗೂ ಕಾರ್ಯದರ್ಶಿ ಶ್ರೀವತ್ಸ ಭಟ್ ಉಪಸ್ಥಿತರಿದ್ದರು.