ಕಾಸರಗೋಡು: ಮಂಜೇಶ್ವರ ವರ್ಕಾಡಿ ಶ್ರೀಕಾವಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ. 12ರಂದು ದೀಪಾವಳಿ ಹಬ್ಬ ಜರಗಲಿದ್ದು, ಬೆಳಗ್ಗೆ 11 ಗಂಟೆಗೆ ಗಣಪತಿ ಕಾಯಿ ಇಡುವುದು ಬಳಿಕ ಮಹಾಪೂಜೆ, ಮಧ್ಯಾಹ್ನ 2 ಗಂಟೆಯಿಂದ 5 ರವರೆಗೆ ಶ್ರೀಕಾವಿ ಯಕ್ಷ ಬಳಗ ವರ್ಕಾಡಿ ಇವರಿಂದ ಯಕ್ಷಗಾನ ತಾಳಮದ್ದಳೆ ನರಕಾಸುರ ಮೋಕ್ಷ ಪ್ರಸಂಗ ನಡೆಯಲಿದೆ.
ಸಂಜೆ 6ರಿಂದ ಭಜನೆ, 7ರಿಂದ ಶ್ರೀ ದೇವರ ನಿತ್ಯ ಪೂಜೆ ಬಳಿಕ ಅವಲಕ್ಕಿ ಅಳೆಯುವುದು, ಮಹಾಪೂಜೆ, ತುಳಸಿ ಪೂಜೆ, ಬಲಿಂದ್ರ ಪೂಜೆ ಬಳಿಕ ದೈವಗಳಿಗೆ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.