ಉಪ್ಪಳ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್.ಡಿ.ಎ ಅಭ್ಯರ್ಥಿ ಎಂ.ಎಲ್ ಅಶ್ವಿನಿ ಪಜ್ವ ರವರ ಮಂಜೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ಪ್ರಚಾರ ಯಾತ್ರೆಯ ಪ್ರತಾಪನರದ ಸಭೆ ನಿನ್ನೆ ಸಂಜೆ ಸೋಂಕಾಲಿನಲ್ಲಿ ನಡೆಯಿತು. ಬಿಜೆಪಿ ಮುಖಂಡರಾದ ಸುಧಾಮ ಗೋಸಾಡ, ಸುನಿಲ್ ಅನಂತಪುರ, ಕೆ.ಪಿ ಅನಿಲ್ ಮಣಿಯಂಪಾರೆ, ಮುರಳೀಧರ ಯಾದವ್, ಅಭ್ಯರ್ಥಿ ಅಶ್ವಿನಿ ಮಾತನಾಡಿದರು. ಅಡ್ವಕೇಟ್ ಬಾಲಕೃಷ್ಣ ಶೆಟ್ಟಿ, ಕೋಳಾರು ಸತೀಶ್ವಂದ್ರ ಭಂಡಾರಿ, ವೇಲಾಯುಧನ್, ವಸಂತ ಕುಮಾರ್ ಮಯ್ಯ, ಪಂಚಾಯತ್ ಸದಸ್ಯೆ ಸುಧಾ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ನೇತಾರ ಮಾಜಿ ಪಂಚಾಯತ್ ಸದಸ್ಯ ಕೆ.ಪಿ ವಲ್ಸರಾಜ್ ಗಣ್ಯರನ್ನು ಸ್ವಾಗತಿಸಿ, ವಂದಿಸಿದರು. ಪ್ರತಾಪನಗರದ ಹಲವು ಬೂತ್ ಪದಾಧಿಕಾರಿಗಳು, ಊರಿನ ಹಿರಿಯರು ಅಭ್ಯರ್ಥಿಗೆ ಶಾಲು ಹೊದಿಸಿ ಗೌರವಿಸಿದರು. ಯಾತ್ರೆ ಬೆಳಿಗ್ಗೆ ಸ್ವರ್ಗ ಪರಿಸರದಿಂದ ಆರಂಭಿಸಿ ವಿವಿಧ ಕಡೆ ಸಾಗಿ ಕುಂಜತ್ತೂರಿನಲ್ಲಿ ಸಮಾಪ್ತಿಗೊಂಡಿತು.