ಎ.ಎಲ್.ಪಿ.ಶಾಲೆ ಇಚ್ಲಂಗೋಡು ಜನರಲ್ ನಲ್ಲಿ ವಿದಾಯ ಕೂಟ ಹಾಗೂ ಶಾಲಾ ವಾರ್ಷಿಕೋತ್ಸವ

Share with


ಉಪ್ಪಳ : ಎ.ಎಲ್.ಪಿಇಚ್ಲಂಗೋಡು ಜನರಲ್ ಶಾಲೆಯಲ್ಲಿ  ಶಾಲಾ ಮುಖ್ಯ ಶಿಕ್ಷಕಿ  ಭಾರತಿ ಟೀಚರ್  ರವರಿಗೆ ವಿದಾಯ ಕೂಟ ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆ  ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ದಿವಾಕರ ಆಳ್ವ  ಧ್ವಜಾರೋಹಣ ಗೈಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ಸಭಾ ಕಾರ್ಯಕ್ರಮವು ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ   ಜಯರಾಮ  ಸ್ವಾಗತಿಸಿದರು. ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿ  ದಿನೇಶ್  ದೀಪ ಬೆಳಗಿಸಿ   ಉದ್ಘಾಟಿಸಿ ಮಾತನಾಡಿದರು. ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ  ರಾಜಗೋಪಾಲ್  ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. . ಬಿ ಆರ್ ಸಿ ಮಂಜೇಶ್ವರದ ಸಿ ಆರ್ ಸಿ ಕೋರ್ಡಿನೇಟರ್  ತಿಲಕ ಟೀಚರ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ದಿವಾಕರ ಆಳ್ವ, ಆಡಳಿತ ಮಂಡಳಿಯ ಕಾರ್ಯದರ್ಶಿ  ಎಂ.ಆರ್ ಕೊರಗಪ್ಪ ಶೆಟ್ಟಿ,  ಮಾಜಿ ವಾರ್ಡು ಸದಸ್ಯೆ  ಜಯಂತಿ ಶೆಟ್ಟಿ, ನಿವೃತ್ತ ಮುಖ್ಯೋಪಾಧ್ಯಾಯ ಭೋಜ,ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ  ಸುಧಿಶ್ಚಂದ್ರ ಶೆಟ್ಟಿ,  ಗೋಪಾಲಕೃಷ್ಣ ಮಾಸ್ಟರ್ ಪಂಜತ್ತೊಟ್ಟಿ, ಪೊಯ್ಯೆ ರಾಧಾಕೃಷ್ಣ , ಶಾಲಾ ಮುಖ್ಯ ಶಿಕ್ಷಕಿ  ಭಾರತಿ ಟೀಚರ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ 2024-25 ನೇ ಶೈಕ್ಷಣಿಕ ವರ್ಷದಲ್ಲಿ   ನಿವೃತ್ತರಾಗಲಿರುವ ಜಿಲ್ಲಾ ವಿದ್ಯಾಧಿಕಾರಿ  ದಿನೇಶ್ ರವರನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ   ರಾಜಗೋಪಾಲ  ಮತ್ತು ಶಾಲಾ ಮುಖ್ಯ ಶಿಕ್ಷಕಿ  ಭಾರತಿ ಟೀಚರ್ ರವರು ಗೌರವಾರ್ಪಣೆಯನ್ನು ಸಲ್ಲಿಸಿದರು. ಇದೇ ವೇಳೆ ಮಕ್ಕಳ ಸ್ವ ರಚನೆಯ ಸಂಚಿಕೆಯಾದ ” ಸೃಷ್ಟಿ” ಎಂಬ ಸಂಚಿಕೆಯನ್ನು ಉಪಜಿಲ್ಲಾ ವಿದ್ಯಾಧಿಕಾರಿ  ರಾಜಗೋಪಾಲ ಬಿಡುಗಡೆಗೊಳಿಸಿದರು.ಶಾಲಾ ಅಧ್ಯಾಪಿಕೆ  ದೀಕ್ಷಿತ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು. ಶಾಲಾ ಅಧ್ಯಾಪಿಕೆ  ರಜೀನ ಬೀಗಂ  ವಂದಿಸಿದರು. ಶಾಲಾ ಅಧ್ಯಾಪಕ ಕೃಷ್ಣ ಮೋಹನ ಮಯ್ಯ  ನಿರೂಪಿಸಿದರು.
ಬಳಿಕ ಮಕ್ಕಳಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳು  ನಡೆಯಿತು.


Share with

Leave a Reply

Your email address will not be published. Required fields are marked *