ಅಡಿಕೆ ಕೃಷಿಗೆ ಹಳದಿ ರೋಗ ಕಾಣಿಸಿಕೊಂಡ ಪರಿಣಾಮ ಮನನೊಂದು ಕೃಷಿಕ ಆತ್ಮಹತ್ಯೆಗೆ

Share with

ಸುಳ್ಯ: ಅಡಿಕೆ ಕೃಷಿಗೆ ಹಳದಿ ರೋಗ ಕಾಣಿಸಿಕೊಂಡ ಪರಿಣಾಮ ಮನನೊಂದು ಕೃಷಿಕ ಆತ್ಮಹತ್ಯೆಗೆ ಶರಣಾದ ಘಟನೆ ಸುಳ್ಯ ತಾಲೂಕಿನ ಮಡಪ್ಪಾಡಿಯ ಬಲ್ಕಜೆಯಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಕೃಷಿಕನನ್ನ ಬಲ್ಕಜೆ ನಿವಾಸಿ ಸೀತಾರಾಮ‌ ಗೌಡ ಎಂದು ಗುರುತಿಸಲಾಗಿದೆ. ಇವರು ಬೆಳೆಸಿದ ಅಡಿಕೆ ತೋಟದಲ್ಲಿ ಅತಿಯಾಗಿ ಹಳದಿ ರೋಗ ಕಾಣಿಸಿಕೊಂಡಿತ್ತು. ಹಾಗಾಗಿ ತೋಟಗಳೆಲ್ಲವೂ ನಾಶಗೊಂಡಿತ್ತು. ಇದರಿಂದ ಕಂಗೆಟ್ಟ ಸೀತಾರಾಮ ಗೌಡರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.


Share with

Leave a Reply

Your email address will not be published. Required fields are marked *