ಮಂಜೇಶ್ವರ: ಹೆದ್ದಾರಿ ಕಡಂಬಾರು ನಿವಾಸಿ ಕೃಷ್ಣಪ್ಪ ಪೂಜಾರಿ (72) ನಿಧನರಾದರು. ಹಿರಿಯ ಕೃಷಿಕರಾದ ಇವರು ಮಂಗಳವಾರ ಸಂಜೆ ಗದ್ದೆಯಲ್ಲಿ ಪೈರು ಕೊಯ್ಯುತ್ತಿದ್ದ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.
ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು. ಮೃತರು ಪತ್ನಿ ಜಯಂತಿ, ಮಕ್ಕಳಾದ ಮಮತ, ರಮಿತಾ, ಸಂಗೀತ, ಸಮಿತಿ ರಾಜ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.