ನವದಂಪತಿ ನಡುವೆ ಹೊಡೆದಾಟ: ಸಾವಿನಲ್ಲಿ ಅಂತ್ಯ..!

Share with

ಕೋಲಾರ: ಕೋಲಾರದ ಕೆಜಿಎಫ್‌ನ ಚಂಬರಸನಹಳ್ಳಿಯಲ್ಲಿ ವಧು-ವರರಿಬ್ಬರು ಸಪ್ತಪದಿ ತುಳಿದ ಕೆಲವೇ ಹೊತ್ತಿನಲ್ಲಿ ಹೊಡೆದಾಡಿಕೊಂಡಿದ್ದು, ಇವರಿಬ್ಬರ ನಡುವಿನ ಜಗಳ ಸಾವಿನಲ್ಲಿ ಅಂತ್ಯಗೊಂಡಿದೆ.

ನಿನ್ನೆ ಬೆಳಿಗ್ಗೆ ಲಿಖಿತಶ್ರೀ ಹಾಗೂ ನವೀನ್‌ ಮದುವೆಯಾಗಿದ್ದು, ಮದುವೆಯಾದ ಮೊದಲ ರಾತ್ರಿ ನವದಂಪತಿ ರೂಮ್‌ಗೆ ಹೋಗಿದ್ದಾರೆ. ಅಲ್ಲೇ ಹೊಡೆದಾಡಿಕೊಂಡ ಪರಿಣಾಮ ಗಂಭೀರ ಗಾಯಗೊಂಡ ಇಬ್ಬರನ್ನೂ ಕೆಜಿಎಫ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವಧು ಲಿಖಿತಶ್ರೀ ನಿನ್ನೆಯೇ ಸಾವನ್ನಪ್ಪಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವರ ನವೀನ್‌ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರಾತ್ರಿ ರವಾನಿಸಲಾಗಿತ್ತು, ಅಲ್ಲಿ ಆತನೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಆಂಡರ್‌ಸನ್‌ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವ ಕಾರಣಕ್ಕಾಗಿ ಇಬ್ಬರ ನಡುವೆ ಜಗಳ ಶುರುವಾಗಿದೆ ಎಂಬುದು ಗೊತ್ತಾಗಿಲ್ಲ ಎಂದು ವರದಿಯಾಗಿದೆ.


Share with

Leave a Reply

Your email address will not be published. Required fields are marked *