ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಎಂ ಅನಂತ ನಿಧನ

Share with


ಮಂಜೇಶ್ವರ: ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಬಿ.ಎಂ ಅನಂತ [೯೦] ನಿಧನರಾದರು. ಕಳೆದ ೨೫ ವರ್ಷಗಳಿಂದ ಅಧ್ಯಕ್ಷರಾಗಿದ್ದ ಇವರು ಬ್ಯಾಂಕ್‌ನ ಆಡಳಿತ ನಿರ್ಧೇಶಕರಾಗಿ ದುಡಿದಿದ್ದು, ಬ್ಯಾಂಕ್ ನ ಅಭಿವೃದ್ದಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.  ೩-೭-೨೦೪ ರಂದು ಬೆಳಿಗ್ಗೆ ೬ಗಂಟೆಗೆ ಮಂಜೇಶ್ವರ ಎರಡನೇ ರೈಲ್ವೇ ಗೇಟ್ ಬಳಿಯ ಅಕ್ಷಯ ನಿಲಯದಲ್ಲಿ ನಿಧನಹೊಂದಿದ್ದಾರೆ.  ಮೃತರು ಮಕ್ಕಳಾದ ಹರ್ಷ, ರಾಹುಲ್, ಸೊಸೆ ಸುಜಾತ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಪತ್ನಿ ಮೀರಾ, ಸೊಸೆ ಗೀತಾ ಈ ಹಿಂದೆ ನಿಧನರಾಗಿದ್ದಾರೆ. ಬಿ.ಎಂ ಅನಂತರವರು ಕಾಸರಗೋಡು ಜಿಲ್ಲಾ ಕೈಕಾರಿಕಾ ಇಲಾಖೆಯಲ್ಲಿ ಜನರಲ್ ಮೆನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಡಾ. ಸುಬ್ಬರಾವ್ ಸಚಿವರಾಗಿದ್ದಾಗ ಅವರ ಪರ್ಸನಲ್ ಸೆಕ್ರಟರಿಯಾಗಿ ಸೇವೆ ಸಲ್ಲಿಸಿದ್ದರು. ನಿಧನಕ್ಕೆ ಸಿ.ಪಿ.ಐ ರಾಜ್ಯ ಸಮಿತಿ, ಜಿಲ್ಲಾ ಸಮಿತಿ, ಮಂಜೇಶ್ವರ ಮಂಡಲ ಸಮಿತಿ, ಲೋಕಲ್ ಸಮಿತಿ, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್‌ನ ಆಡಾಳಿತ ಮಂಡಳಿ, ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್ ಜಯಾನಂದ ಸಹಿತ ಹಲವರು ಸಂತಾಪ ಸೂಚಿಸಿದ್ದಾರೆ


Share with

Leave a Reply

Your email address will not be published. Required fields are marked *