ಪಡಿಬಾಗಿಲು ಸಂಗಮ ಯುವಕ ಮಂಡಲ  ವತಿಯಿಂದ ಗಣೇಶ ಚತುರ್ಥಿ ಹಬ್ಬ

Share with

 
ವಿಟ್ಲ :  ಬಂಟ್ವಾಳ  ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲು ಸಂಗಮ ಯುವಕ ಮಂಡಲ ವಿದ್ಯಾಗಿರಿ ಪಡಿಬಾಗಿಲು ವತಿಯಿಂದ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿವಿಧ  ಆಟೋಟ ಸ್ಪರ್ಧೆಹಾಗೂ ಸಾಧಕರಿಗೆ ಅಭಿನಂದನ ಕಾರ್ಯಕ್ರಮ ಜರಗಿತು

ಕಾನ ಸುಂದರ  ಭಟ್ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭ ದಲ್ಲಿ ಜಿಲ್ಲಾ ಮಟ್ಟದ  ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಕೆಲಿಂಜ ಶಾಲಾ ಶಿಕ್ಷಕ  ಬಿ. ತಿಮ್ಮಪ್ಪ ನಾಯ್ಕ ,ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮೀ ಸಾಗರ್ ಎರುಂಬು, ಸಮಾಜ ಸೇವಕರಾದ ಕೇಶವ ಪೂಜಾರಿ ಮತ್ತು ಹೇಮಾವತಿ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಪು ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ  ಮಾಲತಿ, ನೀರ್ಕಜೆ ಶಾಲೆಯ ಮುಖ್ಯ ಶಿಕ್ಷಕ ಬಾಬು ನಾಯ್ಕ, ಕೆ ಎಸ್ ಆರ್ ಟಿ ಸಿ ಉದ್ಯೋಗಿ ದಿನೇಶ್,ವಕೀಲ  ಮಹೇಶ್, ಯುವಕ ಮಂಡಲದ ಅಧ್ಯಕ್ಷ ತಿರುಮಲೇಶ್ವರ ಮೊದಲಾದವರು  ಉಪಸ್ಥಿತರಿದ್ದರು

  ಎಮ್ ಎಸ್ ಡಬ್ಲ್ಯೂ ಶಿಕ್ಷಕಿ ಚಂದ್ರಾವತಿ ಸ್ವಾಗತಿಸಿ, ದಿನೇಶ್ ಕುಕ್ಕೆಬೆಟ್ಟು ವಂದಿಸಿ, ಅಳಿಕೆ ಅಧ್ಯಾಪಕ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು. ಜ್ಯೋತಿ,ಮನೋಹರ್ ,ಮತ್ತು ಸಂಘದ ಸದಸ್ಯರು ಸಹಕರಿಸಿದರು.


Share with

Leave a Reply

Your email address will not be published. Required fields are marked *