ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಸಮರ ರಂಗೇರಿದೆ. ಕಾಂಗ್ರೆಸ್ ವಿರುದ್ಧ BJP ಚಾರ್ಜ್ಶೀಟ್ ರಿಲೀಸ್ ಮಾಡಿದೆ. MLC ಸಿ.ಟಿ.ರವಿ ಇಂದು ಚಾರ್ಜ್ಶೀಟ್ ರಿಲೀಸ್ ಮಾಡಿ, ಗೃಹಲಕ್ಷ್ಮಿ 2 ತಿಂಗಳ ಹಣ ಇಲ್ಲ, ಸಂಬಂಧಪಟ್ಟ ಮಂತ್ರಿಗಳು ಈ ಬಗ್ಗೆ ಮಾತನಾಡ್ತಿಲ್ಲ ಎಂದು ಆರೋಪಿಸಿದ್ದಾರೆ.

ಹಳ್ಳಿಗಳಿಗೆ ಬಸ್ ಹೋಗ್ತಿಲ್ಲ, ತಳ್ಳೋ ಗಾಡಿಗಳಾಗಿದ್ದಾವೆ. ಗ್ಯಾರಂಟಿ ಕೊಟ್ಟಿದ್ರೆ ಒಂದೂವರೆ ಡಜನ್ ಶಾಸಕರು ಬೆವರು ಸುರಿಸಬೇಕಾಗುತ್ತಿತ್ತಾ? CM ಆದಿಯಾಗಿ ಬೆವರು ಸುರಿಸುವ ಪ್ರಯಾಸ ಬರುತ್ತಿರಲಿಲ್ಲ ಎಂದಿದ್ದಾರೆ.




