ಮಂಜೇಶ್ವರ : ಚಾತುರ್ಮಸ್ಯ ವೃತ ಸಂಕಲ್ಪದ ಪೂರ್ವಭಾವಿ ಯಾಗಿ ಜಗದ್ಗುರು ಶ್ರೀ ಕಾಳಹಸ್ತೇoದ್ರ ಸರಸ್ವತೀ ಮಹಾಸ್ವಾಮಿಗಳವರು 23-6-2024 ರಂದು ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಾಮೇಶ್ವರಿ ದೇವಸ್ಥಾನಕ್ಕೆ ಸಂದರ್ಶನವಿತ್ತರು. ಈ ಸಂದರ್ಭದಲ್ಲಿ ಗುರುಗಳ ಪಾದಪೂಜೆಯನ್ನು ನೆರವೇರಿಸಲಾಯಿತು. ಈ ವೇಳೆ ಚಾತುರ್ಮಾಸ್ಯದ ಆಮಂತ್ರಣವನ್ನು ದೇವಸ್ಥಾನದ ಅಧ್ಯಕ್ಷ ಬಿ ಎಂ ಯದುನಂದನ ಆಚಾರ್ಯ ಮತ್ತು ಪದಾಧಿಕಾರಿಗಳಿಗೆ ಹಾಗೂ ಮುಕ್ತೇಸರರಿಗೆ ಚಾತುರ್ಮಾಸ್ಯ ಸಮಿತಿ ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು, ಕಾರ್ಯದರ್ಶಿ ಲೋಲಾಕ್ಷ ಶರ್ಮಾ ಪಡುಕುತ್ಯಾರು ಇವರು ಹಸ್ತಾಂತರಿಸಿದರು. ನಂತರ ನಡೆದ ಸಭೆಯಲ್ಲಿ ಜಗದ್ಗುರುಗಳವರು ಆಶೀರ್ವಚನವಿತ್ತರು..