ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಹಾರ ಸಹಾಯಧನದ ಚೆಕ್ ಹಸ್ತಾಂತರ

Share with

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.)ಬಂಟ್ವಾಳ ಇದರ ಬಂಟ್ವಾಳ ವಲಯದ ಕಸಬಾ ಕಾರ್ಯಕ್ಷೇತ್ರದ ನವದುರ್ಗ ಸಂಘದ ಸದಸ್ಯರಾದ ಪದ್ಮಲತಾ ದಿನೇಶ್ ರವರ ಮನೆಗೆ ವಿಪರೀತ  ಗಾಳಿ ಮಳೆಗೆ ಮನೆಯ ಮೇಲೆ ಮರ  ಬಿದ್ದು ಹಾನಿಯಾಗಿದ್ದು ಈ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪರಿಹಾರ ಸಹಾಯಧನ ಮಂಜೂರಾಗಿದು ಅದರ ಚೆಕ್ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು  ಯೋಜನಾಧಿಕಾರಿ ಬಾಲಕೃಷ್ಣ, ಬಂಟ್ವಾಳ ವಲಯ ಅಧ್ಯಕ್ಷರಾದ ಮನೋಹರ ಕುಲಾಲ್, ಒಕ್ಕೂಟ ದ ಅಧ್ಯಕ್ಷರಾದ ಪದ್ಮನಾಭ ಗೌಡ, ಪದಾಧಿಕಾರಿ ಶಶಿಧರ್,ವಲಯ ಮೇಲ್ವಿಚಾರಕಿ ರೂಪ ರೈ ಸೇವಾ ಪ್ರತಿನಿಧಿಗಳಾದ ಸಂಪ, ಉಷಾ, ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *