ಉಪ್ಪಳ: ಹನುಮಾನ್ ನಗರ್ ಫ್ರೆಂಡ್ಸ್ ಹನುಮಾನ್ ನಗರ ಉಪ್ಪಳ ಇದರ ರಜತ ಮಹೋತ್ಸವ ದ ಅಂಗವಾಗಿ ಮಂಗಳೂರು ಕೆ.ಎಂ.ಸಿ ಆಸ್ಪತ್ರೆ ಇವರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಮಾ.17ರಂದು ಉಪ್ಪಳ ಅಯ್ಯಪ್ಪ ಮಂದಿರದ ವಠಾರದಲ್ಲಿ ನಡೆಯಿತು.
ಗುರುಸ್ವಾಮಿ ಕುಟ್ಟಿ ಕೃಷ್ಣನ್ ರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಶ್ರೀ ಭಗವತಿ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ಜಯಕುಮಾರ್. ಎಸ್.ಐಲ್, ಹನುಮಾನ್ ನಗರ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಜ್ಯೋತಿ ಪ್ರಸಾದ್ ಎಸ್.ಐಲ್, ಕೆ.ಎಂ.ಸಿ ಆಸ್ಪತ್ರೆ ಅಧಿಕಾರಿ ಶಿಜಿ ಥೋಮಸ್ ಉಪಸ್ಥಿತರಿದರು. ಸುಮಾರು 64ಕ್ಕೂ ಹೆಚ್ಚಿನ ಜನರ ರಕ್ತದಾನ ಮಾಡಿ ಕಾರ್ಯಕ್ರಮಕ್ಕೆ ಯಶಸ್ಸಿಗೆ ಸಹಕರಿಸಿದರು.