ಉಪ್ಪಳ: ಕೋಡಿಬೈಲುನಲ್ಲಿ ನೂತನವಾಗಿ ಶ್ರೀ ಕೃಷ್ಣ ಬಾಲಗೋಕುಲವನ್ನು ಆರಂಭಿಸಲಾಯಿತು. ಕೋಡಿಬೈಲು ನವೋದಯ ಎ.ಎಲ್.ಪಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಆರ್. ಎಸ್. ಎಸ್ ನ ಕಾಲೇಜು ವಿದ್ಯಾರ್ಥಿ ಪ್ರಮುಖ್ ಪುರುಶೋತ್ತಮ ಪ್ರತಾಪನಗರ ಉದ್ಘಾಟಿಸಿದರು. ಶಿಕ್ಷಕಿ ನೀತು ಪ್ರತಾಪನಗರ ಹಾಗೂ ಮಕ್ಕಳ ಸಹಿತ ಹೆತ್ತವರು ಉಪಸ್ಥಿತರಿದ್ದರು.