ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ

Share with

ಪುತ್ತೂರು:  ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆಯನ್ನು  ಶ್ರೀಯುತ ಸತೀಶ್   ಬೊಲಾರ್  ಅವರು     ದೀಪ ಬೆಳಗಿಸಿ ಉದ್ಘಾಟಿಸಿದರು.    ಪುತ್ತೂರಿನ  ತಹಶೀಲ್ದಾರ್  ಶ್ರೀ  ಪುರಂದರ ಹೆಗ್ಡೆ  ಮುಖ್ಯ ಅತಿಥಿಯಾಗಿ  ಪಾಲ್ಗೊಂಡರು . ಕಾಲೇಜಿನ ಅಧ್ಯಕ್ಷ ರಾದ ಶ್ರೀ ಜಯಂತ್ ನಡು ಬೈಲ್  ಕಾರ್ಯಕ್ರಮ ದ  ಅಧ್ಯಕ್ಷತೆಯನ್ನು  ವಹಿಸಿದ್ದರು,  ಕಾಲೇಜಿನ  ವ್ಯವಸ್ಥಾಪಕ ನಿರ್ದೇಶಕಿ  ಶ್ರೀಮತಿ ಕಲಾವತಿ ಜಯಂತ್ ನಡು ಬೈಲ್  ಮತ್ತು ಆಡಳಿತಾಧಿಕಾರಿ  ಶ್ರೀ ಅರ್ಪಿತ್  ಟಿ ಎ  ಕಾರ್ಯಕ್ರಮ ದಲ್ಲಿ  ಉಪಸ್ಥಿತರಿದ್ದರು.



ಮುಖ್ಯ ಅತಿಥಿಯಾಗಿ  ಭಾಗವಹಿಸಿದ ಶ್ರೀಯುತ ಸತೀಶ್ ಬೊಲಾರ್    ಜೀವನದಲ್ಲಿ  ಸವಾಲುಗಳನ್ನು   ಧೈರ್ಯದಿಂದ  ಎದುರಿಸಿ,  ಎಲ್ಲಾ  ವಿದ್ಯಾರ್ಥಿಗಳಿಗೂ ಒಂದಲ್ಲ ಒಂದು ರೀತಿಯ  ಕೌಶಲ್ಯ ಇದ್ದೇ ಇರುತ್ತದೆ  ಅದನ್ನು  ನಾವು ಸಮಯೋಚಿತವಾಗಿ  ಪ್ರಸ್ತುತ ಪಡಿಸಬೇಕು.  ನಾಯಕತ್ವ ಗುಣ ಮೈಗೂಡಿಸಿ  ಸಮಾಜದಲ್ಲಿ  ಆದರ್ಶ  ವ್ಯಕ್ತಿಯಾಗಿ  ಗುರುತಿಸಿಕೊಳ್ಳ ಬೇಕು ಎಂದು  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 

  ಮುಖ್ಯ ಅತಿಥಿಯಾಗಿ ಪುತ್ತೂರ   ನ  ತಹಶೀಲ್ದಾರ್  ಶ್ರೀ  ಪುರಂದರ ಹೆಗ್ಡೆ ಮಾತನಾಡಿ   ಪೋಷಕರು  ತಮ್ಮ  ಮಕ್ಕಳಿಗೆ ಉತ್ತಮ ಸಂಸ್ಕಾರ , ಮೌಲ್ಯಾಧಾರಿತ  ಶಿಕ್ಷಣ  ಹಾಗೂ ಉತ್ತಮ ಉದ್ಯೋಗ   ಸಿಗಬೇಕು  ಎಂದು  ಕಷ್ಟ ಪಟ್ಟು  ವಿದ್ಯಾ ಸಂಸ್ಥೆ  ಗಳಿಗೆ   ಕಳುಹಿಸುತ್ತಾರೆ  ಅವರ  ನಿರೀಕ್ಷೆಗೆ  ಪೂರಕವಾಗಿ ತಮ್ಮ ತಮ್ಮ  ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು  ಹಿತ  ನುಡಿದರು. 

ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ ರವರು  ವಿದ್ಯಾರ್ಥಿ ಒಕ್ಕೂಟ ಕ್ಕೆ  ಪ್ರಮಾಣವಚನ ಬೋಧಿಸಿದರು .  ಕಾಲೇಜಿನ ಆಡಳಿತಾಧಿಕಾರಿ  ಶ್ರೀ ಅರ್ಪಿತ್  ಟಿ ಎ  ಅವರು  ನೂತನ ಪದಾಧಿಕಾರಿಗಳಿಗೆ  ಮಿನಿಟ್ಸ್, ಲೆಕ್ಕಪತ್ರ  ಮತ್ತು  ಫೈಲ್  ಗಳನ್ನು  ಹಸ್ತಾಂತರಿಸಿದರು .

ಕಾಲೇಜಿನ  ಅಧ್ಯಕ್ಷ ರಾದ ಶ್ರೀ ಜಯಂತ್ ನಡು ಬೈಲ್  ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ  ವಿದ್ಯಾರ್ಥಿ ಒಕ್ಕೂಟ  ವು  ಕಾಲೇಜಿನ ಒಂದು ಅವಿಭಾಜ್ಯ ಅಂಗ  . ವಿದ್ಯಾರ್ಥಿಗಳ ಕಲೆ, ಸಾಹಿತ್ಯ ಮತ್ತು ಕ್ರೀಡಾ  ಅಭಿರುಚಿ  ಗಳಿಗೆ ವೇದಿಕೆಯಾಗಿ ,  ವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ   ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಸಲಹೆ ನೀಡಿದರು. 

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಅಂತಿಮ ಪದವಿ ವಾಣಿಜ್ಯ ವಿಭಾಗದ  ಜೀವನ್, ಉಪಾಧ್ಯಕ್ಷೆ ಯಾಗಿ ಕುಮಾರಿ ನವಮಿ  ಅಂತಿಮ ಪದವಿ ಫ್ಯಾಷನ್ ಡಿಸೈನ್ ವಿಭಾಗ ಮತ್ತು  ಕಾರ್ಯದರ್ಶಿಯಾಗಿ  ಕುಮಾರಿ ಪೂಜಿತ   ಕೆ.  ಎಂ ಅಂತಿಮ ಪದವಿ ಆಂತರಿಕ ವಿನ್ಯಾಸ ವಿಭಾಗದಿಂದ ಚುನಾಯಿಸಲ್ಪಟ್ಟಿದ್ದರು.

   ವಿದ್ಯಾರ್ಥಿ ಒಕ್ಕೂಟದ  ಜೊತೆ ಕಾರ್ಯದರ್ಶಿ ಯಾಗಿ   ವಿಜೇತ  ದ್ವಿತೀಯ ಡಿಪ್ಲೋಮಾ ಫ್ಯಾಷನ್  ಡಿಸೈನ್ ವಿಭಾಗ  , ಖಜಾಂಚಿಯಾಗಿ ನರೇಂದ್ರ  ಕೆ  ಅಂತಿಮ ಪದವಿ ಫ್ಯಾಷನ್ ಡಿಸೈನ್ ವಿಭಾಗ ಮತ್ತು  ಕುಮಾರಿ ಟೀನಾ ದ್ವಿತೀಯ ಪದವಿ ವಾಣಿಜ್ಯ ವಿಭಾಗ,   ಕ್ರೀಡಾ ಕಾರ್ಯದರ್ಶಿಯಾಗಿ    ಕುಮಾರಿ ವಿಸ್ಮಿತ  ಅಂತಿಮ  ವಾಣಿಜ್ಯವಿಭಾಗ  ಹಾಗೂ ಜೊತೆಕಾರ್ಯದರ್ಶಿ ಗಳಾಗಿ ಸೃಜನ್.ಕೆ  ದ್ವಿತೀಯ  ಬಿ. ಸಿ. ಎ ಮತ್ತು  ಡಿoಪಲ್  ಕೆ. ಆರ್  ದ್ವಿತೀಯ ಆಂತರಿಕ ವಿನ್ಯಾಸ ವಿಭಾಗ ಮತ್ತು  ಡಿಪ್ಲೋಮಾ  ವಿಭಾಗ ದಿಂದ  , ಸಾಂಸ್ಕೃತಿಕ  ಕಾರ್ಯದರ್ಶಿಯಾಗಿ   ಮಧುರ  ಆರ್.  ವಿ  ಅಂತಿಮ ಪದವಿ ಫ್ಯಾಷನ್  ಡಿಸೈನ್ ವಿಭಾಗ ಹಾಗೂ   ಜೊತೆ ಕಾರ್ಯದರ್ಶಿಗಳಾಗಿ ಕೀರ್ತನ್.ಕೃಷ್ಣ  ಪಿ ಡಿ.  ದ್ವಿತೀಯ   ಬಿ ಸಿ. ಎ   ಮತ್ತು  ಧನ್ಯ ಶ್ರೀ   ದ್ವಿತೀಯ ಪದವಿ  ಫ್ಯಾಷನ್  ಡಿಸೈನ್  ವಿಭಾಗ ಮತ್ತು  ಡಿಪ್ಲೋಮಾ  , ಮಾಧ್ಯಮ ಕಾರ್ಯದರ್ಶಿಯಾಗಿ  ಭಾರ್ಗವಿ .ಎಂ  ಅಂತಿಮ ಪದವಿ ಫ್ಯಾಷನ್  ಡಿಸೈನ್  ವಿಭಾಗ ಹಾಗೂ  ಜೊತೆ  ಕಾರ್ಯದರ್ಶಿಗಳಾಗಿ   ಉಜ್ವಲ.ಯು.ನಾಯ್ಕ್ ದ್ವಿತೀಯ ಪದವಿ ವಾಣಿಜ್ಯ ವಿಭಾಗ ಮತ್ತು  ಅಂಕಿತ  ದ್ವಿತೀಯ ಪದವಿ  ವಾಣಿಜ್ಯ ವಿಭಾಗದಿಂದ ಆಯ್ಕೆಗೊಂಡಿದೆದ್ದಾರೆ . ವಿರೋಧ ಪಕ್ಷದ ನಾಯಕನಾಗಿ  ಕೀರ್ತನ್  ಆಯ್ಕೆಯಾಗಿದ್ದಾರೆ.

ಕಾಲೇಜಿನ ಉಪ ಪ್ರಾಂಶುಪಾಲ ರು  ಮತ್ತು ಆಂತರಿಕ ವಿನ್ಯಾಸ ವಿಭಾಗದ ಮುಖ್ಯಸ್ಥ ರಾದ  ಶ್ರೀ   ರಕ್ಷನ್   ಟಿ ಆರ್  ಸ್ವಾಗತಿಸಿ, ಕಾಲೇಜ್  ಒಕ್ಕೂಟದ ಕಾರ್ಯದರ್ಶಿ  ಯಾದ   ಕುಮಾರಿ ಪೂಜಿತ   ಕೆ.  ಎಂ ಅಂತಿಮ ಪದವಿ ಆಂತರಿಕ ವಿನ್ಯಾಸ ವಿಭಾಗ ವಂದಿಸಿ  , ಬಿ ಎಚ್.  ಎಸ್   ವಿಭಾಗದ  ಉಪನ್ಯಾಸಕಿ ಯಾದ  ಶ್ರುತ  ಕಾರ್ಯಕ್ರಮ  ನಿರೂಪಿಸಿದರು.


Share with

Leave a Reply

Your email address will not be published. Required fields are marked *