
ಪಾಕಿಸ್ತಾನದಲ್ಲಿ ಆಪರೇಷನ್ ಸಿಂಧೂರ್ ದಾಳಿ ನಡೆಸಿದ ನಂತರ, ಭದ್ರತೆಯ ದೃಷ್ಟಿಯಿಂದ ಭಾರತ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ದೇಶದ 9 ಸೂಕ್ಷ್ಮ ಗಡಿ ವಿಮಾನ ನಿಲ್ದಾಣಗಳನ್ನು ಮೇ 10 ರವರೆಗೆ ಬಂದ್ ಮಾಡಲಾಗಿದೆ. ಬಂದ್ ಮಾಡಲಾದ ವಿಮಾನ ನಿಲ್ದಾಣಗಳಲ್ಲಿ ಭುಜ್, ಶ್ರೀನಗರ, ಜಮ್ಮು, ಲೇಹ್, ಅಮೃತಸರ, ಜೋಧಪುರ, ಚಂಡೀಗಢ, ರಾಜ್ಕೋಟ್ ಮತ್ತು ಜಾಮ್ನಗರ ಸೇರಿವೆ.





