ಉಪ್ಪಳ: ಕೆ.ಟಿ ಜಯಕೃಷ್ಣ ಮಾಸ್ಟರ್ ಬಲಿದಾನ ದಿನದ ಅಂಗವಾಗಿ ಪ್ರತಾಪ ನಗರ ಬಿಜೆಪಿ ಹಾಗೂ ಯುವ ಮೋರ್ಚಾ ರ್ಕಾರ್ಯಕರ್ತರು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಆಚರಿಸಿದರು.
ಕಾರ್ಯಕ್ರಮದಲ್ಲಿ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಮಯ್ಯ ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಅವಿನಾಶ್, ಮಂಗಲ್ ಪಾಡಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀಜಿತ್ ಪ್ರತಾಪ್ ನಗರ, ಬಿಜೆಪಿ ಮಂಡಲ ಕಾರ್ಯದರ್ಶಿ ಧನರಾಜ್, ಸಂತೋಷ್, ಪ್ರವೀಣ್ ಹಾಗೂ ಮುಂತಾದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.