ಕಾಸರಗೋಡು: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದ ನಾಗ ದೇವರ ಸನ್ನಿಧಿಯಲ್ಲಿ ಜುಲೈ 17ರಂದು ನಾಗರಪಂಚಮಿಯ ಪ್ರಯುಕ್ತ ಬೆಳಿಗ್ಗೆ 9 ಗಂಟೆಯಿಂದ ಕ್ಷೀರಾಭಿಷೇಕ,ಸೀಯಾಳಭಿಷೇಕ ಮತ್ತು ನಾಗತಂಬಿಲ ನಡೆಯಲಿದೆ.

ಭಕ್ತಾಧಿಗಳು ಹಾಲು, ಸೀಯಾಳವನ್ನು ಬೆಳಿಗ್ಗೆ 8.30 ಗಂಟೆಯ ಮುಂಚಿತವಾಗಿ ತಲುಪಿಸುವಂತೆ ಕ್ಷೇತ್ರದ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




