ಕಾಸರಗೋಡು: ಚೂರಿ ಇರಿತಕ್ಕೆ ಕಾರ್ಮಿಕ ಬಲಿ, ಆರೋಪಿ ಪರಾರಿ

Share with

ಕಾಸರಗೋಡು : ಚೂರಿ ಇರಿತಕ್ಕೊಳಗಾಗಿದ್ದ ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಗರದ ಆನೆಬಾಗಿಲು ಎಂಬಲ್ಲಿ ಏ.21ರಂದು ನಡೆದಿದೆ.

ಪಶ್ಚಿಮ ಬಂಗಾಳ ಮೂಲದ ಸುಶಾಂತ್ ರಾಯ್ ( 28) ಮೃತಪಟ್ಟ ಕಾರ್ಮಿಕ.

ಜೊತೆಗಿದ್ದ ಇತರ ಕಾರ್ಮಿಕರ ನಡುವೆ ಉಂಟಾದ ಜಗಳ ಕೊಲೆಗೆ ಕಾರಣ ಎನ್ನಲಾಗಿದೆ.ವಾಸ ಸ್ಥಳದಲ್ಲಿ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ನಗರದ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರದಲ್ಲಿರಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾಸರಗೋಡು ನಗರ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


Share with

Leave a Reply

Your email address will not be published. Required fields are marked *