Kasaragodu: ಬೈಕ್-ಲಾರಿ ನಡುವೆ ಡಿಕ್ಕಿ; ಪೊಲೀಸ್ ಕಾನ್ಸ್ ಟೇಬಲ್ ಸಾವು

Share with

ಕಾಸರಗೋಡು: ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ಪೊಲೀಸ್ ಕಾನ್ಸ್ ಟೇಬಲ್ ರೋರ್ವರು ಮೃತಪಟ್ಟ ಘಟನೆ ಪಡನ್ನಕ್ಕಾಡ್ ಎಂಬಲ್ಲಿ ಮಾ.30 ರಂದು ನಡೆದಿದೆ.

ಹೊಸದುರ್ಗ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ವಿನೀಶ್ (35) ಮೃತಪಟ್ಟವರು ಎಂದು ತಿಳಿದು ಬಂದಿದೆ.ಕರಿವೆಳ್ಳೂರಿನ ಮನೆಯಿಂದ ಕರ್ತವ್ಯಕ್ಕೆ ಠಾಣೆಗೆ ಬೈಕ್ ನಲ್ಲಿ ಬರುತ್ತಿದ್ದಾಗ ಪಡನ್ನ ಕ್ಕಾಡ್ ರೈಲ್ವೆ ಮೇಲ್ಸೇತುವೆಯಲ್ಲಿ ನೀಲೇಶ್ವರ ಕಡೆಯಿಂದ ಕಾಞಿಂಗಾಡ್ ಕಡೆಗೆ ಬರುತ್ತಿದ್ದ ಟ್ಯಾಂಕರ್ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಜೀವ ಉಳಿಸಲಾಗಲಿಲ್ಲ.


Share with

Leave a Reply

Your email address will not be published. Required fields are marked *