
ಬೆಳಾಲು: ಕೊಲ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿ ಸಂಘವನ್ನು ಪುನಾರಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಲೋಕೇಶ್ ಓಣಾಜೆ, ಕಾರ್ಯದರ್ಶಿಯಾಗಿ ರಮೇಶ್ ಮರಕಡ, ಕೋಶಾಧಿಕಾರಿಯಾಗಿ ಕರಿಯಣ್ಣ ಬೇರಿಕೆ ಅವರನ್ನು ಆಯ್ಕೆ ಮಾಡಲಾಯಿತು.
ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಕಲ್ಲಾಜೆ ಅವರ ಆಯ್ಕೆ ನಡೆಯಿತು. ಉಪಾಧ್ಯಕ್ಷರ ಹುದ್ದೆಗೆ ಶ್ರೀಮತಿ ಭಾರತಿ ಮರಕಡ ಮತ್ತು ಲೋಕೇಶ್ ಮಂಡಾಲು ನೇಮಕವಾದರು.
ಸಂಘಟನಾ ಕಾರ್ಯದರ್ಶಿಗಳಾಗಿ ರಾಜಗೋಪಾಲ್ ಭಟ್, ಯತೀಶ್ ಕೊಡಂಗೆ, ಮತ್ತು ರಾಜೇಶ್ ಗೌಡ ಕುರ್ಕಿಲು ಆಯ್ಕೆಯಾದರು.




