
ಹಾಸನ: ಮೈಸೂರಿನಲ್ಲಿ ನಡೆದ 13ನೇ ರಾಜ್ಯಮಟ್ಟದ ಪಂಚ ಕುಸ್ತಿ ಪಂದ್ಯಾವಳಿಯಲ್ಲಿ ಹಾಸನದ ಟೈಮ್ಸ್ ಗುರುಕುಲ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಮತಾ ಗುರು ಇವರ ಸುಪುತ್ರಿಯರು ಆದ ಧ್ವನಿ ಎಸ್ ಜಿ ಮತ್ತು ಟೈಮ್ಸ್ ಗುರುಕುಲ ಶಾಲೆಯ ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹನಿ ಎಸ್ ಜಿ ಇಬ್ಬರು ಕೂಡ ಸಬ್ ಜೂನಿಯರ್. ಜೂನಿಯರ್ ಹಾಗೂ ಸೀನಿಯರ್ ಮೂರು ವಿಭಾಗದಲ್ಲೂ ಬಲಗೈ ಹಾಗೂ ಎಡಗೈ ಎರಡರಲ್ಲೂ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಆಗಸ್ಟ್ ನಲ್ಲಿ ಪಂಜಾಬ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪಂಚಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.





