ಪೈವಳಿಕೆ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸಿಕುಮೇರಿ [ಲಾಲ್ಭಾಗ್] -ಕುರುಡಪದವು ರಸ್ತೆ ಅಭಿವೃದ್ದಿಗೆ ನಾಲ್ಕೂವರೆ ಕೋಟಿ ಮಂಜೂರುಗೊAಡು ಗುತ್ತಿಗೆದಾರ ಹಾಗೂ ಅಧಿಕಾರಿಗಳು ತಲುಪಿ ಸ್ಥಳ ಪರಿಶೀಲಿಸಿ ಇದೀಗ ಹಲವು ತಿಂಗಳು ಕಳೆದರೂ ಕಾಮಗಾರಿ ಆರಂಭಿಸದ ಹಿನ್ನೆಲೆಯಲ್ಲಿ ನಾಗರಿಕರು ಹೋರಾಟಕ್ಕೆ ಸಿದ್ದತೆ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ಈ ರಸ್ತೆ ಹದಗೆಟ್ಟು ಹೊಂಡ ಗುಂಡಿಗಳಿAದ ಶೋಚನೀಯವಸ್ಥೆಗೆ ತಲುಪಿ ಬಸ್ ಸಹಿತ ವಾಹನ ಸಂಚಾರ ದುಸ್ಥರವಾಗಿದೆ. ರಸ್ತೆ ಉದ್ದಕ್ಕೂ ಅಲ್ಲಲ್ಲಿ ತಿರುವು, ಇಕ್ಕೆಡೆಗಳಲ್ಲಿ ಬೃಹತ್ ಹೊಂಡಗಳು ಕೂಡಿದ ರಸ್ತೆಯಲ್ಲಿ ದಿನನಿತ್ಯಬಸ್ ಸಹಿತ ನೂರಾರು ವಾಹನಗಳು ಹರಹಾಸದಿಂದ ಸಂಚರಿಸುತ್ತಿದೆ. ಈ ವೇಳೆ ಪದೇ ಪದೇ ಬಿಡಿಭಾಗ ಹಾನಿಗೀಡಾಗುತ್ತಿರುವುದಾಗಿ ಬಸ್ ಸಿಬ್ಬಂದಿಗಳು ದೂರಲಾಗಿದೆ. ರಸ್ತೆ ಅಭಿವೃದ್ದಿಗೊಳ್ಳುತ್ತಿರುವುದು ಊರವರ ಹಲವು ವರ್ಷಗಳ ಕನಸು ನನಸಾಗುತ್ತಿರುವಂತೆ ಕಾಮಗಾರಿ ಆರಂಭಗೊಳ್ಳದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಪಂಚಾಯತ್ನ 1,2.3 ಹಾಗೂ 19ನೇ ವಾರ್ಡ್ ಸಂಗಮಿಸುವ ಲಾಲ್ಭಾಗ್ನಿಂದ – ಕುರುಡಪದವು ತನಕ ಒಟ್ಟು ಏಳು ಮುಕ್ಕಾಲು ಕಿಲೋ ಮೀಟರ್ ಉದ್ದ ಹಾಗೂ ಐದೂವರೆ ಮೀಟರ್ ಅಗಲ ರಸ್ತೆ ನಿರ್ಮಾಣಗೊಳ್ಳಲಿರುವುದಾಗಿ ಹೇಳಲಾಗುತ್ತಿದ್ದರೂ ಗುತ್ತಿಗೆದಾರ ಕಾಮಗಾರಿ ಆರಂಭಿಸಲು ಮುಂದಾಗದಿರುವುದು ನಾಗರಿಕರನ್ನು ಅಸಮದಾನಕ್ಕೀಡು ಮಾಡಿದೆ. ಕೂಡಲೇ ರಸ್ತೆ ಅಭಿವೃದ್ದಿ ಕಾಮಗಾರಿ ನಡೇಸಬೇಕೆಂದು ಒತ್ತಾಯಿಸಿದ್ದಾರೆ. ಇದೀಗ ನಾಗರಿಕರು ಒಟ್ಟು ಸೇರಿ ಹೋರಾಟಕ್ಕೆ ಸಿದ್ದತೆ ನಡೆಸುತ್ತಿದ್ದೇನ್ನಾಲಾಗಿದೆ.