ವರ್ಕಾಡಿ ಬಳಿಯ ಬಜಿಲಾಡಿಯಲ್ಲಿ ಗುಡ್ಡೆ ಪ್ರದೇಶದಲ್ಲಿ ಭೂ ಕುಸಿತ : ಹಲವು ಕುಟುಂಬಗಳ ಸ್ಥಳಾಂತರ ಜಿಲ್ಲಾಧಿಕಾರಿಗಳ ಸಹಿತ ಅಧಿಕಾರಿಗಳಿಂದ  ಪರಿಶೀಲನೆ

Share with


ಮಂಜೇಶ್ವರ:  ಗುಡ್ಡೆ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ಊರವರನ್ನು ಭಯ ಭೀತರನ್ನಾಗಿಸಿದ ಘಟನೆ ನಡೆದಿದೆ. ವರ್ಕಾಡಿ ಗ್ರಾಮ  ಪಂಚಾಯತ್ ವ್ಯಾಪ್ತಿಯ ೭ನೇ ವಾರ್ಡ್ ಬಾಕ್ರಬೈಲ್ ಬಳಿಯ ಕಜೆ ಸಮೀಪದ ಬಜಿಲಾಡಿ ಗುಡ್ಡೆ ಪ್ರದೇಶದ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು, ಇದರಿಂದ ಕೆಳಗಡೆ ಪ್ರದೇಶದಲ್ಲಿರುವ ಹಲವಾರು ಮನೆಗಳು ಭೀತಿಯಲ್ಲಿದೆ.   ೨ಫೀಟ್ ಭೂಮಿ ಕುಸಿದು ಹೋಗಿದ್ದು, ಭಾರೀ ಗಾತ್ರದಲ್ಲಿ ಬಿರುಕು ಬಿಟ್ಟು  ಆತಂಕದ ವಾತಾವರಣ ಉಂಟಾಗಿದೆ. ಗುಡ್ಡೆ ಪ್ರದೇಶ ಹಾಗೂ ಕೆಳಭಾಗದಲ್ಲಿ ವಸವಾಗಿರುವ ೬ ಕೂಟುಂಬಗಳನ್ನು  ಸ್ಥಳಾಂತರಿಸಲಾಗಿದೆ.  ಮಳೆಗೆ ಇದೇ ಪರಿಸರದಲ್ಲಿರುವ ಗುಡ್ಡೆ ಕುಸಿಯುವ ಭೀತಿಯಲ್ಲಿದೆ.  ಘಟನೆ ಸ್ಥಳಕ್ಕೆ 4-8-2024 ರಂದು  ಜಿಲ್ಲಾಧಿಕಾರಿ ಕೆ.ಇಂಬ ಶೇಖರ್, ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಮಂಜೇಶ್ವರ ತಶೀಲ್ದಾರ್ ಶಿಬು.ಪಿ ಭೇಟಿ ನೀಡಿ ಬಿರುಕುಬಿಟ್ಟ ಪ್ರದೇಶಗಳನ್ನು ಹಾಗೂ ಪರಿಸರದಲ್ಲಿ ವಾಸವಾಗಿರುವ ಕುಟುಂಬಗಳ  ಮಾಹಿತಿಯನ್ನು ಸಂಗ್ರಹಿಸಿದರು. ಈ ವೇಳೆ ಮಂಜೇಶ್ವರ ಠಾಣಾಧಿಕಾರಿ ರಾಜೀವ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರು, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ.ಎಸ್, ಕಾರ್ಯದರ್ಶಿ ಜಿ.ಅನಿಲ್ ಕುಮಾರ್,  ವಾರ್ಡ್ ಸದಸ್ಯರೂ, ಪಂಚಾಯತ್ ಮಾಜಿ ಅಧ್ಯಕ್ಷರಾದ ಪಿ.ಬಿ ಅಬೂಬಕ್ಕರ್ ಪಾತೂರು, ಕೊಡ್ಲಮೊಗರು ಗ್ರಾಮಾಧಿಕಾರಿ ಕಿರಣ್ ಶೆಟ್ಟಿ , ಜಿಯೋಲಾಜಿಸ್ಟ್  ಸಿಬ್ಬಂದಿಗಳಾದ ವಿಜಯ್, ಅಶ್ವತಿ, ಮಂಜೇಷ್ವರ ತಾಲೂಕು ಕಚೇರಿ ಸಿಬ್ಬಂದಿ  ನೌಷಾದ್.ಎಸ್, ಹಾಗೂ ರಾಜಕೀಯ, ಸಾಮಾಜಿಕ  ಮುಂದಾಳುಗಳು, ಊರವರು  ಉಪಸ್ಥಿತಿತರಿದ್ದರು.


Share with

Leave a Reply

Your email address will not be published. Required fields are marked *