ಬನ್ನೇರುಘಟ್ಟ ಉದ್ಯಾನವನದಲ್ಲಿ ಸಫಾರಿ ಬಸ್‌ಗೆ ನುಗ್ಗಲು ಮುಂದಾದ ಚಿರತೆ!

Share with

ಬೆಂಗಳೂರು : ನಗರದ ಹೊರವಲಯದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಯೊಂದು ಸಫಾರಿ ಬಸ್ ಗೆ ನುಗ್ಗಲು ಮುಂದಾಗಿ ಪ್ರವಾಸಿಗರಲ್ಲಿ ಆತಂಕಕ್ಕೆ ಕಾರಣವಾದ ಘಟನೆ ನಡೆದಿದೆ. ಈ ದೃಶ್ಯದ ವಿಡಿಯೋ ವೈರಲ್ ಆಗಿದೆ.

ಚಿರತೆ ಬಸ್ ನ ಕಿಟಕಿಗೆ ಹಾರಿ ನುಗ್ಗಲು ಮುಂದಾದಾಗ ಪ್ರವಾಸಿಗರಿಗೆ ಸಾಕಷ್ಟು ಭಯದ ವಾತಾವರಣ ನಿರ್ಮಾಣವಾಯಿತು. ಕೆಲವರು ಕಿರುಚಾಡಿದರು. ಸುರಕ್ಷತಾ ವ್ಯವಸ್ಥೆ ಇದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ.
ಈ ರೋಮಾಂಚಕ ಕ್ಷಣದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಣಿ ಮೇಲಕ್ಕೆ ಏರಲು ಪ್ರಯತ್ನಿಸುವುದಲ್ಲದೆ, ಗಾಬರಿಗೊಂಡ ಪ್ರಯಾಣಿಕರನ್ನು ವಾಹನದ ಕಿಟಕಿಯ ಮೂಲಕ ಇಣುಕಿ ನೋಡುತ್ತಿರುವುದು ಗಮನ ಸೆಳೆದಿದೆ.
ಚಿರತೆ ಬಸ್ಸಿನ ಮೇಲೆ ನೆಗೆಯಲು ಯತ್ನಿಸಿತು ಈ ವೇಳೆ ಚಾಲಕ ವಾಹನವನ್ನು ನಿಧಾನವಾಗಿ ಮುಂದಕ್ಕೆ ಚಲಿಸಿದನು. ಚಿರತೆ ಅಲ್ಲಿಂದ ತೆರಳಿತು.


Share with

Leave a Reply

Your email address will not be published. Required fields are marked *