ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿಡಿಲು ನಿರೋಧಕಗಳನ್ನು ಸ್ಥಾಪಿಸಬೇಕು

Share with

ಮೀಂಜ: ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿಡಿಲು ನಿರೋಧಕಗಳನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಡಿ ವೈ ಎಫ್ ಐ ಮೀಂಜ 2 ವಿಲ್ಲೇಜ್ ಸಮಿತಿಯು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್ ಶೆಟ್ಟಿ ಇವರಿಗೆ ಮನವಿ ನೀಡಲಾಯಿತು.
ಕಳೆದ ದಿವಸ ಕುಳೂರು ಶಾಲೆಯಲ್ಲಿ ಸಿಡಿಲು ಬಡಿದ ಘಟನೆಯಲ್ಲಿ ಶಾಲೆಯ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣವಾಗಿ ನಾಶವಾಗಿದ್ದು, ವಿದ್ಯಾರ್ಥಿಗಳು ಭಾರಿ ಅನಾಹುತದಿಂದ ಯಾವುದೇ ಅಪಾಯಗಲಿಲ್ಲದೆ ಪಾರಾಗಿದ್ದಾರೆ.
ಈ ಘಟನೆಯನ್ನು ಮುಂದಿಟ್ಟುಕೊಂಡು ಇನ್ನು ನಮ್ಮ ಪ್ರದೇಶದಲ್ಲಿ ಇಂತಹ ಅನಾಹುತಗಳು ನಡೆಯಬಾರದು ಎಂಬ ಕಾರಣದಿಂದ ಮೀಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಿಡಿಲು ನಿರೋಧಕಗಳನ್ನು ಸ್ಥಾಪಿಸಲು ಡಿ ವೈ ಎಫ್ ಐ ವತಿಯಿಂದ ಪಂಚಾಯತ್ ಅಧ್ಯಕ್ಷರಿಗೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಡಿಫಿ ವಿಲ್ಲೇಜ್ ಕಾರ್ಯದರ್ಶಿ ಉದಯ ಸಿ ಎಚ್, ಬ್ಲೋಕ್ ಸಮಿತಿಯ ಜತೆ ಕಾರ್ಯದರ್ಶಿ ಅನಿಲ್ ಚಿಗುರುಪಾದೆ, ಬ್ಲೋಕ್ ಸಮಿತಿ ಸದಸ್ಯೆ ಪದ್ಮಜಾ ಕುಳೂರು, ಕುಳೂರಿನ ವಾರ್ಡ್ ಸದಸ್ಯರಾದ ಜನಾರ್ಧನ ಪೂಜಾರಿ ಜೊತೆಗಿದ್ದರು


Share with

Leave a Reply

Your email address will not be published. Required fields are marked *