ಪುತ್ತೂರು: ಅಕ್ಷಯ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಮಾ.21ರಂದು ಪದವಿ ಪೂರ್ವ ಅಂತರ ಕಾಲೇಜು ಉತ್ಸವ ಹಾಗೂ ಮಾ.22 ಮತ್ತು 23ರಂದು ವಾರ್ಷಿಕೋತ್ಸವ “ಅಕ್ಷಯ ವೈಭವ 2K24” ಜರುಗಲಿದೆ.
ಮಾ.21ರಂದು ಬೆಳಿಗ್ಗೆ 9:30 ಕ್ಕೆ ನಡೆಯಲಿರುವ ಪದವಿ ಪೂರ್ವ ಅಂತರ ಕಾಲೇಜು ಉತ್ಸವದ ಉದ್ಘಾಟನೆಯನ್ನು ಎಸ್ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಶಿಕುಮಾರ್ ರೈ ನೆರವೇರಿಸಲಿದ್ದು, ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 3:30ಕ್ಕೆ ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಮಾ.22ರಂದು ಸಂಜೆ 5 ಗಂಟೆಯ ಬಳಿಕ ಫ್ಯಾಷನ್ ಷೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮವು ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷಯ ಕಾಲೇಜಿನ ವ್ಯವಾಸ್ಥಾಪಕ ನಿರ್ದೇಶಕರಾದ ಕಲಾವತಿ ಜಯಂತ್ ಅವರು ವಹಿಸಲಿದ್ದಾರೆ.
ಮಾ.23ರ ಕಾರ್ಯಕ್ರಮವು ಅಕ್ಷಯ ಕಾಲೇಜಿನ ಚೇರ್ ಮ್ಯಾನ್ ಜಯಂತ್ ನಡುಬೈಲುರವರು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಪುತ್ತೂರು ಶಾಸಕರಾದ ಆಶೋಕ್ ಕುಮಾರ್ ರೈ, ನಟ ಬೋಜರಾಜ ವಾಮಂಜೂರ್, ಆಳ್ವಾಸ್ ವಿದ್ಯಾಸಂಸ್ಥೆ ಚೇರ್ ಮ್ಯಾನ್ ಡಾ| ಮೋಹನ್ ಆಳ್ವ, ಭಾರತ್ ಕೋ-ಅಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಸೂರ್ಯಕಾಂತ್ ಜೆ.ಸುವರ್ಣ, ಡಾ| ಗೀತ ಪ್ರಕಾಶ್, ಬುಡಿಯರ್ ರಾಧಕೃಷ್ಣ ರೈ ಹಾಗೂ ಇನ್ನಿತರ ಗಣ್ಯರು ಉಪಸ್ಥಿತಲಿರುವರು.