ಮಂಜೇಶ್ವರ: ರಸ್ತೆ ಮಧ್ಯೆ ನಿಲುಗಡೆಗೊಂಡಿದ್ದ ಲಾರಿಯ ಹಿಂಬದಿಗೆ ಬೈಕ್ ಡಿಕ್ಕಿ : ಸವಾರ ಗಂಭೀರ

Share with

ಮಂಜೇಶ್ವರ: ಇಲ್ಲಿಗೆ ಸಮೀಪದ ಕುಂಜತ್ತೂರು ತೂಮಿನಾಡಿನ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆ ಮಧ್ಯದಲ್ಲಿ ನಿಲುಗಡೆಗೊಳಿಸಲಾಗಿದ್ದ ಲಾರಿಯೊಂದರ ಹಿಂಬದಿಗೆ ಬೈಕೊಂದು ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಸವಾರನನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಜುಲೈ. 15ರಂದು ರಾತ್ರಿ 8 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಉದ್ಯಾವರ ಬಿ ಎಸ್ ನಗರ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ರಜಾಕ್ ಬಿ ಕೆ (44) ಗಾಯಗೊಂಡ ವ್ಯಕ್ತಿ ಈತನನ್ನು ಗಂಭೀರ ಗಾಯಗಳೊಂದಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯ ನಿಘಾ ಘಟಕದಲ್ಲಿರಿಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಹೆಲ್ಮೇಟ್ ಪುಡಿಯಾಗಿ ತಲೆಗೆ ಗಂಭೀರ ಗಾಯಗಳಾಗಿವೆ. ಲಾರಿ ಬ್ರೇಕ್ ಫೇಲ್ ಆಗಿರುವ ಹಿನ್ನೆಲೆಯಲ್ಲಿ ನಡು ರಸ್ತೆಯಲ್ಲಿ ಉಳಿದಿರುವುದಾಗಿ ಮಾಹಿತಿ ಲಭಿಸಿದೆ.


Share with

Leave a Reply

Your email address will not be published. Required fields are marked *