ಮಂಜೇಶ್ವರ: ವಿದ್ಯುತ್ ಶಾಕ್ ತಗಲಿ ಯುವಕ ಮೃತ್ಯು

Share with

ಮಂಜೇಶ್ವರ: ವಿದ್ಯುತ್ ಶಾಕ್ ತಗಲಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಹೊಸಂಗಡಿ ಅಂಗಡಿಪದವು ನಿವಾಸಿ [ದಿ] ಅಶೋಕ್ ರವರ ಪುತ್ರ ಪ್ರಜ್ವಲ್ [19] ಮೃತಪಟ್ಟ ಯುವಕ.

ಹೊಸಂಗಡಿ ಅಂಗಡಿಪದವು ನಿವಾಸಿ [ದಿ] ಅಶೋಕ್ ರವರ ಪುತ್ರ ಪ್ರಜ್ವಲ್

ಮಾ.23ರಂದು ಮಧ್ಯಾಹ್ನ ಅಂಗಡಿಪದವಿನ ಅಂಗಡಿಯೊಂದರ ಮುಂಭಾಗದಲ್ಲಿ ವಿದ್ಯುತ್ ಹರಿಯುತ್ತಿದ್ದ ಕಬ್ಬಿಣದ ಗೇಟ್‌ನ್ನು ತಿಳಿಯದೆ ಸ್ಪರ್ಶಿಸಿದಾಗ ವಿದ್ಯುತ್ ಶಾಕ್ ತಗಲಿದ್ದು, ಬೊಬ್ಬೆ ಕೇಳಿದ ಸ್ಥಳೀಯರು ವಿದ್ಯುತ್ ಕಂಬದಿಂದ ವಯರ್‌ನ್ನು ವಿಚ್ಚೇದಿಸಿ, ಕೂಡಲೇ ಉಪ್ಪಳದ ಖಾಸಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾನೆ.

ಈತ ಸಂಘ ಪರಿವಾರದ ಸಕ್ರೀಯ ಕಾರ್ಯಕರ್ತನಾಗಿದ್ದಾನೆ. ಮಂಜೇಶ್ವರ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಪೋಲೀಸರ ನೇತೃತ್ವದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಿನ್ನೆ ರಾತ್ರಿ ವಾಮಂಜೂರು ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.

ಮೃತನ ತಾಯಿ ಕಲಾವತಿ, ಸಹೋದರರಾದ ಅಭಿಲಾಷ್, ಅಖಿಲೇಶ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ವಿವಿಧ ರಾಜಕೀಯ ನೇತಾರರಾದ ಆದರ್ಶ್.ಬಿಎಂ, ವಸಂತ ಕುಮಾರ್ ಮಯ್ಯ, ಸುಧಾಮ ಗೋಸಾಡ, ವಿಜಯ ಕುಮಾರ್ ರೈ, ಮಣಿಕಂಠ ರೈ, ಪದ್ಮನಾಭ ಕಡಪ್ಪರ, ಹರ್ಷಾದ್ ವರ್ಕಾಡಿ, ಕೆ.ಆರ್ ಜಯಾನಂದ, ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ ಜೀನ್ ಲವಿನೋ ಮಂತೇರೋ, ಮೊಹಮ್ಮದ್ ಸಿದ್ದಿಕ್, ವಿಶ್ವನಾಥ ಕುದೂರು, ಕಿಶೋರ್ ಕುಮಾರ್ ಬಿಜೆಪಿ ಅಭ್ಯರ್ಥಿ ಎಂಎಲ್ ಅಶ್ವಿನಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು, ಹಿತೈಷಿಗಳು ಸಹಿತ ನೂರಾರು ಮಂದಿ ತೆರಳಿ ಸಂತಾಪ ಸೂಚಿಸಿದ್ದಾರೆ.


Share with

Leave a Reply

Your email address will not be published. Required fields are marked *